ಮೈಸೂರು : ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರ ಸಿನಿಮಾಗೆ ಕಾಪಿ ರೈಟ್ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಮೈಸೂರು ಕೋರ್ಟ್ ತಡೆಯಾಜ್ಞೆ ನೀಡಿದೆ. ಸಿ.ಆರ್. ಅನಿಲ್ ಕುಮಾರ್ ಎಂಬುವರು ಕಾಪಿರೈಟ್ ಉಲ್ಲಂಘನೆ ಆರೋಪ ಹೊರಿಸಿ ಮೈಸೂರಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಭಾರತದ ಫುಟ್ ಬಾಲ್ ಇತಿಹಾಸದ ಬಗ್ಗೆ ಕಥೆ ಬರೆದಿದ್ದ ಅನಿಲ್ ಕುಮಾರ್, 1900ರಿಂದ ಇದುವರೆಗಿನ ಫುಟ್ ಬಾಲ್ನ ಮಾಹಿತಿಯನ್ನು ದಾಖಲು ಮಾಡಿದ್ದರು. ಬೀದರ್ ಸ್ನೇಹಿತರೊಬ್ಬರ ಮೂಲಕ ಅನಿಲ್ ಕುಮಾರ್ ಅವರನ್ನ ಮುಂಬೈಗೆ ಕರೆಸಿಕೊಂಡಿದ್ದ ಸುಖದಾಸ್ ಸೂರ್ಯವಂಶಿ, 2019ರ ಫೆಬ್ರವರಿಯಲ್ಲಿ ಸಂಪೂರ್ಣ ಕತೆ ಕೇಳಿ, ಸ್ಕ್ರಿಪ್ಟ್ ಪಡೆದಿದ್ದರು. ಆನಂತರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆ ಬಳಿಕ ಮುಂಬೈನ ಕಾಪಿ ರೈಟ್ ಸಂಸ್ಥೆಯಲ್ಲಿ ಅನಿಲ್ ಕುಮಾರ್ ಕಥೆ ನೋಂದಾಯಿಸಿದ್ದರು. ಈಗ ಆ ಕಥೆಯ ಒಂದು ಭಾಗವನ್ನು ಕದ್ದು ಚಿತ್ರ ಮಾಡಲು ಹೊರಟಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ.
ಬಾಲಿವುಡ್ ನಟ ಅಜಯ್ ದೇವಗನ್ ಹಾಕಿಕೊಂಡು ಮೈದಾನ್ ಹೆಸರಿನ ಸಿನಿಮಾ ತಗೆಯಲಾಗಿದೆ. ಝೀ ಸ್ಟುಡಿಯೋ ವ್ಯವಸ್ಥಾxಪಕ ನಿರ್ದೇಶಕ ಬೋನಿ ಕಫೂರ್, ಸುಖದಾಸ್ ಸೂರ್ಯವಂಶಿ, ಅಮಿತ್ ಶರ್ಮಾ, ಸೈದಿನ್ ಖುದ್ರಾಸ್, ಆಕಾಶ್ ಚಾವ್ಲಾ, ಅರುನವ ಜಾಯ್ ಸೇನ್ ಗುಪ್ತಾಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಪ್ರಚಾರ : ಪೋಸ್ಟ್ ವೈರಲ್ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ದೂರು..!