ಬೆಂಗಳೂರು : ಒಂದೇ ಜಮೀನಿಗೆ 9 ಕೋಟಿ ಪರಿಹಾರ ನೀಡಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ದಿನೇಶ ಕಲ್ಲಹಳ್ಳಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ದೇವನಹಳ್ಳಿ ಸಮೀಪ ಹರಳೂರು ಬಳಿ ವಿಶೇಷ ಕೈಗಾರಿಕಾ ವಲಯ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಎರಡು ಎಕರೆ 32ಗುಂಟೆ ಜಮೀನಿಗೆ 9 ಕೋಟಿ ಅಕ್ರಮವಾಗಿ ಪರಿಹಾರ ಕೊಟ್ಟು ಮೂರು ಕೋಟಿ ಲಂಚ ಪಡೆದಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿಯವರು ಬಾಳಪ್ಪ ಹಂದಿಗುಂದ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ.
2021ರಲ್ಲಿಯೂ ಬಾಳಪ್ಪ ಹಂದಿಗುಂದ KIADB ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದಾಗಲೂ ಅಕ್ರಮವಾಗಿ ಹಣ ಬಿಡುಗಡೆ ಮಾಡಿದ್ದರು. ಭೂಮಾಲೀಕರಿಗೆ ತುರ್ತು ಪರಿಸ್ಥಿತಿಗೆ ಇದ್ದಂತಹ ಹಣವನ್ನು ಲಂಚಕ್ಕಾಗಿ ಅಕ್ರಮವಾಗಿ ಪರಿಹಾರ ನೀಡಿದ್ದರು.
ಇದೀಗ ಬಾಳಪ್ಪ ಹಂದಿಗುಂದ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಹಂದಿಗುಂದ ಒಂದೇ ಜಮೀನಿಗೆ 9 ಕೋಟಿ ಅಕ್ರಮವಾಗಿ ಪರಿಹಾರ ಕೊಟ್ಟಿದ್ದಷ್ಟೇ ಅಲ್ಲದೆ ಮೂರು ಕೋಟಿ ಲಂಚ ಕೂಡ ಪಡೆದಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ‘ನಮ್ಮತ್ತೆ ಬೇಗ ಸಾಯಬೇಕು ಸ್ವಾಮಿ’ – ನೋಟಿನಲ್ಲಿ ವಿಚಿತ್ರ ಕೋರಿಕೆ ಬರೆದು ಕಾಣಿಕೆ ಹುಂಡಿಗೆ ಹಾಕಿದ ಸೊಸೆ..!