ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಸರ್ವಾನುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಹೈಕಮಾಂಡ್ನಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಚುರುಕುಗೊಂಡಿದೆ. ಹಿರಿಯ ನಾಯಕರು ಮತ್ತು ಯುವ ನಾಯಕರನ್ನು ಸೇರಿಸಿ ಈ ಬಾರಿಯ ಸಂಪುಟವನ್ನು ರೂಪಿಸಲಾಗಿದೆ.
ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮತ್ರಿ, ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ, ಡಾ.ಜಿ ಪರಮೇಶ್ವರ್ ಅವರಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ, ಯು.ಟಿ ಖಾದರ್ ಅವರಿಗೆ ಸಮಾಜ ಕಲ್ಯಾಣ ಇಲಾಖೆ, ಬಿ ಕೆ ಹರಿಪ್ರಸಾದ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ಗೃಹ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.
ಹಾಗೆಯೇ ಎನ್ .ಎ.ಹ್ಯಾರಿಸ್ ಅವರಿಗೆ ಸಾರಿಗೆ ಇಲಾಖೆ, ರೂಪ ಶಶಿಧರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ ಇಲಾಖೆ, ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜವಾಬ್ದಾರಿ ನೀಡಲಾಗುವುದು.
ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ಪಟ್ಟಿ
ಡಿಕೆ ಶಿವಕುಮಾರ್ – ಮುಖ್ಯಮಂತ್ರಿ, ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ

ಡಾ.ಜಿ ಪರಮೇಶ್ವರ್ – ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ

ಯು.ಟಿ ಖಾದರ್ – ಸಮಾಜ ಕಲ್ಯಾಣ ಇಲಾಖೆ

ಎಂ.ಬಿ ಪಾಟೀಲ್ – ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಇಲಾಖೆ

ಬಿ ಕೆ ಹರಿಪ್ರಸಾದ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ

ಕೃಷ್ಣಭೈರೇಗೌಡ – ಕಂದಾಯ ಇಲಾಖೆ

ಕಂಪ್ಲಿ ಗಣೇಶ್ – ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆ

ರಾಮಲಿಂಗಾರೆಡ್ಡಿ – ಗೃಹ ಇಲಾಖೆ

ಎನ್ .ಎ.ಹ್ಯಾರಿಸ್ – ಸಾರಿಗೆ ಇಲಾಖೆ

ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ

ರೂಪ ಶಶಿಧರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಬಿ.ಝೆಡ್.ಜಮೀರ್ ಅಹ್ಮದ್ ಖಾನ್ – ವಸತಿ ಇಲಾಖೆ

ಕೆ ಎಂ ಶಿವಲಿಂಗೇಗೌಡ – ಕೃಷಿ ಮತ್ತು ತೋಟಗಾರಿಕೆ ಇಲಾಖೆ

ಡಾ ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ ಇಲಾಖೆ

ತನ್ವೀರ್ ಸೇಠ್ – ಪೌರಾಡಳಿತ ಮತ್ತು ವಕ್ಫ್ ಇಲಾಖೆ

ಕೆ ಜೆ ಜಾರ್ಜ್ – ಇಂಧನ ಇಲಾಖೆ

ಈಶ್ವರ್ ಖಂಡ್ರೆ – ಅರಣ್ಯ ಇಲಾಖೆ

ಟಿ.ಬಿ ಜಯಚಂದ್ರ – ಕಾನೂನು ಮತ್ತು ಸಂಸದೀಯ ಇಲಾಖೆ

ಬಾಲಕೃಷ್ಣ – ಅಬಕಾರಿ ಇಲಾಖೆ

ಶಿವಾನಂದ ಪಾಟೀಲ್ – ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಪ್ರಿಯಾಂಕ್ ಖರ್ಗೆ – ಬೃಹತ್ ಕೈಗಾರಿಕ ಇಲಾಖೆ

ಬೋಸ್ ರಾಜು – ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ

ಮಂಕಳ ವೈದ್ಯ – ಪ್ರವಾಸೋದ್ಯಮ ಇಲಾಖೆ

ಬಿ.ಕೆ. ಸಂಗಮೇಶ್ವರ್ – ಸಣ್ಣ ನೀರಾವರಿ ಇಲಾಖೆ

ಎಸ್ ಎಸ್ ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ

ರಘುಮೂರ್ತಿ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ

ಅಬ್ಬಯ್ಯ ಪ್ರಸಾದ್ – ಸಾಂಖ್ಯಿಕ ಮತ್ತು ಯೋಜನೆ

ಬಿ.ಆರ್.ಪಾಟೀಲ್ – ಸಕ್ಕರೆ ಮತ್ತು ಕಬ್ಬು

ಬೇಳೂರು ಗೋಪಾಲಕೃಷ್ಣ – ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ

ಇದನ್ನೂ ಓದಿ : ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ ಉಪತಹಶೀಲ್ದಾರ್ ಆತ್ಮಹತ್ಯೆ!









