Download Our App

Follow us

Home » ಸಿನಿಮಾ » ಯುವ​​-ಶ್ರೀದೇವಿ ಡಿವೋರ್ಸ್ ಕೇಸ್​ ವಿಚಾರಣೆ ಆ.23ಕ್ಕೆ ಮುಂದೂಡಿಕೆ..!

ಯುವ​​-ಶ್ರೀದೇವಿ ಡಿವೋರ್ಸ್ ಕೇಸ್​ ವಿಚಾರಣೆ ಆ.23ಕ್ಕೆ ಮುಂದೂಡಿಕೆ..!

ಬೆಂಗಳೂರು : ನಟ ರಾಘವೇಂದ್ರ ರಾಜ್​​ಕುಮಾರ್​ರವರ ಮಗ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್​​ಗೆ ಅರ್ಜಿ ಸಲ್ಲಿಸಿ, ಕೋರ್ಟ್​ ಮೆಟ್ಟಿಲೇರಿದ್ದರು. ಮಾತ್ರವಲ್ಲದೆ ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ 1ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್​ನಲ್ಲಿ​ ವಿಚಾರಣೆಯನ್ನು ಜುಲೈ 4ಕ್ಕೆ‌ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಬೇಕಿತ್ತು. ಆದರೆ ಇದೀಗ ಕೋರ್ಟ್ ಆಗಸ್ಟ್​ 23ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಕೋರ್ಟ್​ಗೆ ಅರ್ಜಿ ಸಲ್ಲಿಸಿ ಯುವ ಶ್ರೀದೇವಿಗೆ ನೋಟಿಸ್ ಕಳಿಸಿದ್ದ. ಯುವ ನೋಟಿಸ್​ಗೆ ಶ್ರೀದೇವಿ ಉತ್ತರವನ್ನೂ ಕೊಟ್ಟಿದ್ದರು. ಡಿವೋರ್ಸ್​ ಅರ್ಜಿಗೆ ಶ್ರೀದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ,
ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೇಳಿದ್ದರು.

ಮೀಡಿಯೇಷನ್ ಕೌನ್ಸಿಲಿಂಗ್ ಮುಗಿದ ನಂತರ ವಾದಕ್ಕೆ ಅವಕಾಶ ನೀಡಿದ್ದರು. ಬಳಿಕ ಕೋರ್ಟ್​ ಆಕ್ಷೇಪಣೆಯ ವಾದ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಆಗಸ್ಟ್ 23ಕ್ಕೆ ಮೀಡಿಯೇಷನ್ ದಿನಾಂಕ ನಿಗದಿ ಮಾಡೋದಾಗಿ ಕೋರ್ಟ್​ ಸೂಚನೆ ನೀಡಿದೆ. ಹಾಗಾಗಿ ನ್ಯಾಯಾಧೀಶರಾದ ಕಲ್ಪನಾ ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಇದನ್ನೂ ಓದಿ : ಬಗೆದಷ್ಟೂ ಬಯಲಾಗುತ್ತಿದೆ ಮುಡಾ ಕರ್ಮಕಾಂಡ – ಈ ಮೂವರೇ ಸೈಟ್​ ಅಕ್ರಮದ ಕಿಂಗ್​​ಪಿನ್​​ಗಳು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here