ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲುನ ಸೇರಿದ್ದಾರೆ. ದರ್ಶನ್ ಭೇಟಿ ಮಾಡಲು ಪ್ರತಿ ದಿನ ಆಪ್ತರು, ಕುಟುಂಬಸ್ಥರು ತೆರಳುತ್ತಿದ್ದಾರೆ. ಎಲ್ಲರಿಗೂ ಜೈಲಿನ ನಿಯಾಮವಳಿಗಳ ಪ್ರಕಾರವೇ ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.
ಅಂತೆಯೇ ನಿನ್ನೆ ದರ್ಶನ್ ಅವರನ್ನು ನಟ ಧನ್ವೀರ್ ಅವರು ಭೇಟಿಯಾಗಲು ಆಗಮಿಸಿದ್ದರು. ಧನ್ವೀರ್ ಅವರಿಗೂ ಮೊದಲೇ ಓರ್ವ ಮಹಿಳೆ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಜೈಲಿನ ಎಂಟ್ರಿ ಬುಕ್ನಲ್ಲಿ ಸಮತಾ ಎನ್ನುವ ಹೆಸರು ಉಲ್ಲೇಖ ಮಾಡಿ ಜೈಲಲ್ಲಿ ದರ್ಶನ್ರನ್ನ ಭೇಟಿಯಾಗಿದ್ದಾರೆ. ಹೀಗಾಗಿ ಬೇರೆಯವರಿಗೆ ಭೇಟಿಯಾಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಈಕೆಯ ಎಂಟ್ರಿಯಿಂದ ನಟ ಧನ್ವೀರ್ಗೆ ದರ್ಶನ್ ಭೇಟಿ ಮಾಡಲು ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ.
ಹಾಗದ್ರೆ ದರ್ಶನ್ ನೋಡಲು ಜೈಲಿಗೆ ಎಂಟ್ರಿ ಕೊಟ್ಟ ಈ ಸಮತಾ ಯಾರು? ರೇಣುಕಾಸ್ವಾಮಿ ಕೊಲೆ ಕೇಸ್ನ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಆಪ್ತ ಸ್ನೇಹಿತೆಯೇ ಸಮತಾ ಎಂದು ಇದೀಗ ಗೊತ್ತಾಗಿದೆ. ಪವಿತ್ರಾ, ಸಮತಾ ಇಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದು, ಪವಿತ್ರಾ ಗೌಡ ಅವರ ಜೊತೆ ಬಹಳ ವರ್ಷಗಳಿಂದ ಜೊತೆಗಿರುವ ಸಮತಾ ಅವರು ನಿನ್ನೆ ದರ್ಶನ್ ಅವರನ್ನ ಭೇಟಿ ಮಾಡಿ ಬಂದಿದ್ದಾರೆ.
ಈ ಬೆನ್ನಲ್ಲೇ ಸಮತಾ ದರ್ಶನ್ ಅವರನ್ನು ಭೇಟಿ ಮಾಡಿದ್ದೇಕೆ? ಜೈಲಿನಲ್ಲಿ ದರ್ಶನ್ ಭೇಟಿ ಮಾಡುವ ಈಕೆಯ ಉದ್ದೇಶವಾದ್ರು ಏನು? ಎಂಬೆಲ್ಲ ಚರ್ಚೆಗಳು ನಡೆಯುತ್ತಿದೆ. ಇನ್ನು ಸಮತಾ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದಕ್ಕೆ ವಿಜಯಲಕ್ಷ್ಮಿ ಫ್ಯಾಮಿಲಿ ಆಕ್ರೋಶ ಹೊರಹಾಕಿದ್ದು, ಕುಟುಂಬ ಕಲಹ ಸರಿಹೋಗುವ ಹೊತ್ತಲ್ಲಿ ಈಕೆ ಜೈಲಿಗೆ ಹೋಗಿದ್ಯಾಕೆ? ಪವಿತ್ರಾಗೌಡ ಗೆಳತಿಯಾಗಿದ್ರೆ ಆಕೆಯನ್ನ ಮಾತ್ರ ನೋಡ್ಕೊಂಡ್ ಹೋಗಬೇಕಿತ್ತು. ದರ್ಶನ್ ಭೇಟಿ ಮಾಡಿರೋದು ಕುಟುಂಬದಲ್ಲಿ ಒಡುಕು ತರುವ ಕೆಲಸ ಅಂತಾ ವಿಜಯಲಕ್ಷ್ಮಿ ಕುಟುಂಬದಿಂದ ಪರೋಕ್ಷವಾಗಿ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಎ.ಎನ್ ರಘುನಂದನ್..!