ವಿಜಯನಗರ : ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಬಂಗಾರದ ಚೈನ್ ಕದ್ದು ಖದೀಮರು ಎಸ್ಕೇಪ್ ಆಗಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ಬಡವಣೆಯಲ್ಲಿ ನಡೆದಿದೆ. ಕಿರಾಣಿ ಅಂಗಡಿ ಮಾಲೀಕೆ ಶಕುಂತಲಾ (75) ಬಂಗಾರ ಕಳೆದುಕೊಂಡ ವೃದ್ದೆ.
ಕಿರಾಣಿ ಅಂಗಡಿ ಬೈಕ್ನಲ್ಲಿ ಬಂದ ಇಬ್ಬರು ಕದಿಮರು ಸಿಗರೇಟ್ ಖರೀದಿ ಮಾಡಿದ್ದಾರೆ. ಬೆಂಕಿ ಪಟ್ಟಣ ಕೇಳಿದಂತೆ ಮಾಡಿ ಅಂಗಡಿ ಮಾಲೀಕೆಯಾಗಿರು ವೃದ್ದೆಯ ಕೋರಳಲ್ಲಿದ್ದ ಅಂದಾಜು 2.70 ಲಕ್ಷ ಬೆಲೆ ಬಾಳುವ 45 ಗ್ರಾಂ. ಬಂಗಾರ ಕಿತ್ತು ಪರಾರಿಯಾಗಿದ್ದಾರೆ.
ಇನ್ನು ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರ ಕದ್ದಿರೋದ್ರಿಂದ ಕೊಟ್ಟೂರಿನ ಗ್ರಾಸ್ಥರು ಆತಂಕಗೊಂಡಿದ್ದಾರೆ. ಇನ್ನು ಘಟನೆಯ ಬಗ್ಗೆ ಕೊಟ್ಟೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೈಸೂರು MUDAದಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ – 252 ಎಕ್ರೆಯಲ್ಲಿ 6000ಕ್ಕೂ ಹೆಚ್ಚು ಸೈಟುಗಳ ನಿರ್ಮಾಣ..!
Post Views: 41