ಬೆಂಗಳೂರು : ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟನಿಗೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ನಲ್ಲಿ ನಡೆದಿದೆ. ಚರಿತ್ ಬಾಳಪ್ಪ ಹಲ್ಲೆಗೊಳಗಾದ ಕಿರುತೆರೆ ನಟನಾಗಿದ್ದು, ಪಕ್ಕದ ಮನೆಯ ಅಪರಿಚಿತ ವ್ಯಕ್ತಿಯೊಬ್ಬ ಚರಿತ್ ಬಾಳಪ್ಪ ಮೇಲೆ ಹಲ್ಲೆ ಮಾಡಿದ್ದಾಗಿ ಕಿರುತೆರೆ ನಟ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಬಾಳಪ್ಪ ದೂರು ನೀಡಿದ್ದಾರೆ. ಚರಿತ್ ಬಾಳಪ್ಪ ಶೂಟಿಂಗ್ ಹೋಗುವ ವೇಳೆ ಖಾಲಿ ಜಾಗದಲ್ಲಿ ಕಸ ಇಟ್ಟಿದ್ದಾರೆ. ಈ ವೇಳೆ ಅದೇ ಏರಿಯಾದ ಅಪರಿಚಿತ ವ್ಯಕ್ತಿ ಪ್ರಶ್ನಿಸಿದ್ದಾರೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಬಾಳಪ್ಪ ಮೇಲೆ ಅಪರಿಚಿತ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಅರೋಪಿಸಲಾಗಿದೆ.
ಅಪರಿಚಿತ ವ್ಯಕ್ತಿ ನಟನಿಗೆ ಕಿರುಬೆರಳಿಗೆ ಗಾಯ ಮಾಡಿದ್ದು, ಕಳೆದ ಫೆಬ್ರವರಿ 23ನೇ ತಾರೀಖು ಈ ಘಟನೆ ನಡೆದಿದೆ. ಶೂಟಿಂಗ್ ಇರುವ ಕಾರಣ ಚರಿತ್ ಬಾಳಪ್ಪ ತಡವಾಗಿ ದೂರು ನೀಡಿದ್ದು, ನಟನ ದೂರಿನ ಆದಾರದ ಮೆಲೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಶ್ವವಿಖ್ಯಾತ ಕಾಜಿರಂಗ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಬೆಳ್ಳಂಬೆಳಗ್ಗೆ ಮೆಗಾ ಸಫಾರಿ..!