ಬೆಂಗಳೂರು : ಮ್ಯೂಸಿಕ್ ಕನ್ಸರ್ಟ್ ನಿಲ್ಲಿಸಿದ್ದಕ್ಕೆ ಪುಂಡರಿಂದ ದಾಂಧಲೆ ನಡೆದಿರುವ ಘಟನೆ ಬೆಂಗಳೂರಿನ ವರ್ತೂರಿನ ಸರ್ಜಾಪುರ ಬಳಿ ನಡೆದಿದೆ. ಕಾರ್ಯಕ್ರಮ ನಿಲ್ಲಿಸಿದ್ದಕ್ಕೆ ಪುಂಡರು ಗಲಾಟೆ ಮಾಡಿದ್ದು, ಈ ವೇಳೆ ಪೊಲೀಸರು ಹಾಗೂ ಆಯೋಜಕರ ಮಧ್ಯೆ ವಾಗ್ವಾದ ನಡೆದಿದೆ.
ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪುಂಡರನ್ನು ಚದುರಿಸಿದ್ದಾರೆ. ಪೊಲೀಸರ ಅನುಮತಿ ಪಡೆಯದೆ ಮ್ಯೂಸಿಕ್ ಕನ್ಸರ್ಟ್ ಆಯೋಜನೆ ಮಾಡಿದ್ದರು.
ಕಾಲೇಜಿನ ಗ್ರೌಂಡ್ನಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಅನುಮತಿ ಪಡೆದಿಲ್ಲ ಅಂತ ಪೊಲೀಸರು ಕಾರ್ಯಕ್ರಮ ನಿಲ್ಲಿಸಿ, ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ವಿಜಯನಗರ : ಹಣ ಡಬಲ್ ಮಾಡುವುದಾಗಿ ಪೂಜೆ ಹೆಸರಲ್ಲಿ ವಂಚನೆ – ಮೂವರ ಬಂಧನ, 35 ಲಕ್ಷ ರೂ. ವಶಕ್ಕೆ..!
Post Views: 72