ಅಹಮದಾಬಾದ್ : ಐಪಿಎಲ್ 2024 – ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿತ್ತು. ಆದರೆ ಇದೀಗ ಐಪಿಎಲ್ ಕಿಂಗ್ ವಿರಾಟ್ ಕೊಹ್ಲಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆ ಇಂದು IPL ಎಲಿಮಿನೇಟರ್ ಪಂದ್ಯ ನಡೆಯುತ್ತಾ ಇಲ್ವಾ ? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ.
ಬೆದರಿಕೆ ಹಿನ್ನೆಲೆ ಆರ್ಸಿಬಿ ಎಲ್ಲಾ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದು, ಬೆಳಗ್ಗೆ ನಡೆಯಬೇಕಿದ್ದ ನೆಟ್ ಪ್ರಾಕ್ಟೀಸ್ ರದ್ದಾಗಿದೆ. RCB ಸಂಜೆ ಪ್ರಿ-ಮ್ಯಾಚ್ ಪ್ರೆಸ್ಮೀಟ್ ರದ್ದು ಮಾಡಿದ್ದು, ಈವರೆಗೆ ಆರ್ಸಿಬಿ ಆಟಗಾರರು ಹೊಟೇಲ್ನಲ್ಲೇ ಉಳಿದಿದ್ದಾರೆ. ಇದೀಗ ಅಹಮದಾಬಾದ್ ಹೊಟೇಲ್ಗೆ ಭಾರೀ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.
ಅಹಮದಾಬಾದ್ ಏರ್ಪೋರ್ಟ್ನಲ್ಲಿ ನಾಲ್ವರು ಶಂಕಿತರನ್ನು ಅರೆಸ್ಟ್ ಮಾಡಿದ್ದಾರೆ. IPL ಪಂದ್ಯದ ವೇಳೆ ಗುಮಾನಿ ಸ್ಫೋಟಕ ಸಂಚು ರೂಪಿಸಿದ್ದು, ಬಂಧನ ಬೆನ್ನಲ್ಲೇ RCB ಆಟಗಾರರಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ : ರೇವ್ ಪಾರ್ಟಿಯಲ್ಲಿ ನಾನಿದ್ದೆ ಎಂದು ಒಪ್ಪಿಕೊಂಡ ನಟಿ ಆಶಿರಾಯ್..!