ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್ನ ಬಾರ್ಬಡೋಸ್ ಬ್ರಿಡ್ಜ್ ಟೌನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಬಾರ್ಬಡೋಸ್ಗೆ ಡೇಂಜರಸ್ ‘ಬೆರಿಲ್’ ಸೈಕ್ಲೋನ್ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ.
ಇದೀಗ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಕರೆದುಕೊಂಡು ಬರಲು ಕೇಂದ್ರ ಸರ್ಕಾರ ವಿಶೇಷ ವಿಮಾನ ಸೌಲಭ್ಯ ಕಲ್ಪಿಸಿದೆ. ಚಂಡಮಾರುತ ಭೀತಿಯಿಂದ ಹೋಟೆಲ್ನಲ್ಲಿದ್ದ T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಪ್ಲೇಯರ್ಸ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಿಬ್ಬಂದಿ ವರ್ಗದವರು ವೆಸ್ಟ್ ಇಂಡೀಸ್ ಬರ್ಬಡೋಸ್ನಲ್ಲಿ ವಿಮಾನ ಹತ್ತಿದ್ದಾರೆ.
ಈಗಾಗಲೇ ವಿಶ್ವಕಪ್ ಟ್ರೋಫಿಯೊಂದಿಗೆ ತವರಿನತ್ತ ಹೊರಟಿರುವ ಆಟಗಾರರೆಲ್ಲ ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ರೋಹಿತ್ ಪಡೆ ಸ್ವಾಗತಕ್ಕೆ ಸಜ್ಜಾಗಿರುವ ಪ್ಲ್ಯಾನ್ಸ್ಗಳು ಏರ್ಪೋರ್ಟ್ನಿಂದಲೇ ಭರ್ಜರಿಯಾಗಿ ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಟೀಂ ಇಂಡಿಯಾ ಕರೆತರಲು ಪ್ಲಾನ್ ಮಾಡಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆಯಿದೆ.
ಇದನ್ನೂ ಓದಿ : ಕೊಲೆ ನಡೆದು 24 ದಿನ ಕಳೆದ್ರೂ ರೇಣುಕಾಸ್ವಾಮಿ ಮೊಬೈಲ್ ಸಿಕ್ಕಿಲ್ಲ- ನಕಲಿ ಸಿಮ್ ಕಾರ್ಡ್ ಪಡೆಯಲು ಪೊಲೀಸರ ಹರಸಾಹಸ..!