ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾನಿಲಯ ವಿರುದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಕ್ರೋಶ ಹೊರಹಾಕಿದ್ದರೆ. ಸಂಗೀತ , ನೃತ್ಯ, ಹಾಗೂ ತಾಳವಾದ್ಯ ಪರೀಕ್ಷಾ ದಾಖಲಾತಿಗಳ ನೋಂದಣಿ ಮತ್ತು ಪರಿಶೀಲನೆಗಾಗಿ ಕಾಯಿಸ್ತಿರೋದಕ್ಕೆ 2000 ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸುವ ಪರೀಕ್ಷೆಗೆ ಅರ್ಜಿಸಲ್ಲಿರುವ ರಾಮನಗರ, ತುಮಕೂರು, ಬೆಂಗಳೂರು ದಕ್ಷಿಣದ ವಿದ್ಯಾರ್ಥಿಗಳು, ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸರಿಯಾದ ಮಾಹಿತಿ ನೀಡ್ತಿಲ್ಲ. ಪರೀಕ್ಷಾ ನೋಂದಣಿ ಪರಿಶೀಲನೆಗೆ ಇಂದು ಕೊನೆಯ ದಿನಾಂಕ. ವಿದ್ಯಾರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಪ್ರತಿ ವರ್ಷ ಸಂಗೀತ, ನೃತ್ಯ, ಹಾಗೂ ತಾಳವಾದ್ಯ ಪರೀಕ್ಷೆ ಏಪ್ರಿಲ್, ಮೇನಲ್ಲಿ ನಡೆಯುತ್ತಿತ್ತು. ದಾಖಲಾತಿ ಪ್ರತಿ ಪಡೆದು ದೃಢೀಕರಿಸುವುದಕ್ಕೆ ಇವತ್ತೇ ಕೊನೆಯ ದಿನ. ಆದ್ರೂ ವಿವಿಯಿಂದ ದೃಢೀಕರಣ ಮಾಡಿಕೊಳ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರೆ.
ಇದನ್ನೂ ಓದಿ : “Vote ನಮ್ಮ Power” ರಾಪ್ ಸಾಂಗ್ ಮೂಲಕ ಯುವಜನತೆಗೆ ಮತದಾನದ ಮಹತ್ವ ಸಾರಿದ ಸ್ಯಾಂಡಲ್ವುಡ್ ತಾರೆಯರು..!