Download Our App

Follow us

Home » ಜಿಲ್ಲೆ » ವಿಜಯನಗರ : ಕಾಲು ಜಾರಿ ಬಿದ್ದು ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಸಾ*ವು..!

ವಿಜಯನಗರ : ಕಾಲು ಜಾರಿ ಬಿದ್ದು ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಸಾ*ವು..!

ವಿಜಯನಗರ : ಕಾಲು ಜಾರಿ ಬಿದ್ದು ಹೊಂಡದಲ್ಲಿ ಮುಳುಗಿ ಕಾನೂನು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ಬೆಟ್ಟದಲ್ಲಿ ನಡೆದಿದೆ. ಕೆ. ಗೋಣಿಸ್ವಾಮಿ (24) ಸಾವನ್ನಪ್ಪಿರೋ ಯುವಕ ಎಂದು ಗುರುತಿಸಲಾಗಿದೆ.

ಮೃತ ಯುವಕ ಚಿತ್ರದುರ್ಗದಲ್ಲಿ ಎರಡನೇ ವರ್ಷದ ಕಾನೂನು ಪದವಿ ಓದುತ್ತಿದ್ದ. ಹರಪನಹಳ್ಳಿ ತಾಲೂಕಿನ ಕಣವಿಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ. ಅದೇ ಸಂಬಂಧಿಕರ ಜೊತೆಗೆ ಉಚ್ಚಂಗಿದುರ್ಗಕ್ಕೆ ತೆರಳಿದ್ದ. ಪೂಜೆಗೆ ಅಂತ ಹೊಂಡದಲ್ಲಿ ನೀರು ತುಂಬಲು ಗೋಣಿಸ್ವಾಮಿ ತೆರಳಿದ್ದಾಗ ಕಾಲು ಉಚ್ಚಂಗಿದುರ್ಗದ ಅರಿಸಿಣ ಹೊಂಡದಲ್ಲಿ ಬಿದ್ದಿದ್ದಾನೆ. ಹೊಂಡಕ್ಕೆ ಬಿದ್ದ ಗೋಣಿಸ್ವಾಮಿಗೆ ಈಜು ಬಾರದೇ ಇರೋದ್ರಿಂದ ಹೊಂಡದಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾನೆ.

ಹೊಂಡಕ್ಕೆ ಬಿದ್ದ ಯುವಕನನ್ನ ಹೊರತೆಗೆಯಲು ಯತ್ನಿಸಿದ್ರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ವಿದ್ಯಾರ್ಥಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗೋಣಿಸ್ವಾಮಿ ಕಾಲು ಜಾರಿ ಹೊಂಡಕ್ಕೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪ್ರಭಾವಿ ಮಂತ್ರಿಯ ಸೆಕ್ಸ್​​ ವಿಡಿಯೋ ಸ್ಪೋಟ.. ಆ ಪವರ್​ಫುಲ್​ ಮಿನಿಸ್ಟರ್​ ಯಾರು ಗೊತ್ತಾ?

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here