ಬೆಂಗಳೂರು : ಕೊಳೆ ಬಟ್ಟೆ ಹಾಕ್ಕೊಂಡಿದ್ದ ಕಾರಣಕ್ಕೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ರೈತನನ್ನು ಸಿಬ್ಬಂದಿ ತಡೆದಿದ್ದಾನೆ. ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದ ವೃದ್ಧನನ್ನು ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ತಡೆದಿದ್ದಾರೆ.
ವೃದ್ಧನನ್ನು ತಡೆದಿದ್ದಕ್ಕೆ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವೃದ್ಧ ರೈತನ ಪರ ನಿಂತು BMRCL ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತಗೆದುಕೊಂಡಿದ್ದಾರೆ. ಇದೀಗ ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋ ಫುಲ್ ವೈರಲ್ ಆಗಿದೆ.
ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್ಪೋರ್ಟ್ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.
ಟ್ವೀಟ್-Xನಲ್ಲಿ BMRCLಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರ ಮೆಟ್ರೋನಾ ಅಂತ ಕಿಡಿ ಕಾರಿದ್ದು, ಸಿಬ್ಬಂದಿ ವಿರುದ್ಧ ಕ್ರಮತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜ್ಞಾನವಾಪಿ ಪ್ರಕರಣ : ಮುಸ್ಲಿಂ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!