ಬೆಂಗಳೂರು : ಕೆ.ಆರ್ ನಗರ ಸಂತ್ರಸ್ತೆ ಕಿಡ್ನಾಪ್ ಪ್ರಕರಣ ಸಂಬಂಧ ಭವಾನಿ ರೇವಣ್ಣ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ. SIT ಮುಖ್ಯಸ್ಥ ಮಹಿಳಾ DySP ರ್ಯಾಂಕ್ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಮೇಲೆ ಭವಾನಿ ರೇವಣ್ಣ ಎಸ್ಕೇಪ್ ಆಗಿದ್ದು, ಬೆಂಗಳೂರು, ಹಾಸನದಲ್ಲಿ ಹುಡುಕಾಡಿದರೂ ಭವಾನಿ ಪತ್ತೆಯಾಗಿಲ್ಲ.
ಮೊಬೈಲ್ ಸ್ವಿಚ್ ಆಫ್ ಮಾಡಿ ಭವಾನಿ ರೇವಣ್ಣ ಎಸ್ಕೇಪ್ ಆಗಿದ್ದಾರೆ. ಪದ್ಮನಾಭನಗರದ ದೇವೆಗೌಡರ ಮನೆಯಲ್ಲಿದ್ದು, ಹೆಂಡತಿ ಬಗ್ಗೆ ಕೇಳಿದರೆ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನಲೆ ಮಹಿಳಾ DySP ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳ ತಂಡ ರಚನೆಯಾಗಿದೆ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸೋ ಮುನ್ನ ಭವಾನಿ ಅವರನ್ನು ಅರೆಸ್ಟ್ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ಬಂಧನದ ಭೀತಿಯಲ್ಲಿ ಎಸ್ಕೇಪ್ ಆಗಿರುವ ಭವಾನಿ ರೇವಣ್ಣ ಮತ್ತೆ ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ.
ಇದನ್ನೂ ಓದಿ : ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಪಾರುಪತ್ಯ : ಕಾಂಗ್ರೆಸ್ಗೆ ಸಿಕ್ಕಿದ ಸ್ಥಾನ ಎಷ್ಟು ಗೊತ್ತಾ?