ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ನಲ್ಲಿ ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ಗನ್ಮ್ಯಾನ್ ಹಾಗೂ ಕಾರ್ ಡ್ರೈವರ್ಗೂ SIT ನೋಟಿಸ್ ಜಾರಿ ಮಾಡಿದ್ದು, ಇಬ್ಬರಿಗಾಗಿ SIT ಹುಡುಕಾಟ ನಡೆಸುತ್ತಿದೆ.
ಪ್ರಜ್ವಲ್ ಹಾಗೂ ತಾಯಿ ಭವಾನಿ ರೇವಣ್ಣ ಅವರ ಕಾರು ಓಡಿಸುತ್ತಿದ್ದ ಡ್ರೈವರ್ ಅಜಿತ್ಗೆ ಎಸ್ಐಟಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ವಿಚಾರಣೆಗೆ ಬರುವಂತೆ ಎರಡು ನೋಟಿಸ್ ಜಾರಿ ಮಾಡಿದೆ. ಆತ ಪತ್ತೆ ಇಲ್ಲದ ಕಾರಣ, ಹೊಳೆನರಸೀಪುರದಲ್ಲಿರುವ ಆತನ ನಿವಾಸಕ್ಕೆ ತೆರಳಿ ನೋಟಿಸ್ ನೀಡಲಾಗಿದೆ.
ಸಂತ್ರಸ್ತೆ ಕಿಡ್ನಾಪ್ ಕೇಸ್ನಲ್ಲಿ ಕಾರ್ ಡ್ರೈವರ್ ಅಜಿತ್ ಪಾತ್ರವಿರೋ ಆರೋಪ ಕೇಳಿ ಬಂದಿದ್ದು, ಇದೀಗ ಅಜಿತ್ಗಾಗಿ ಹಾಸನ, ಮಂಡ್ಯ, ಮೈಸೂರಿನಲ್ಲಿ SIT ಶೋಧ ನಡೆಸುತ್ತಿದೆ. ರೇವಣ್ಣ ಅರೆಸ್ಟ್ ನಂತರ ಅಜಿತ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕಿಡ್ನ್ಯಾಪ್ ಪ್ರಕರಣ ದಾಖಲಾದ ಬಳಿಕ ಕಾರು ಚಾಲಕ ಅಜಿತ್ ತಲೆಮರೆಸಿಕೊಂಡಿದ್ದಾನೆ. ಕಾರಣ, ಸಂತ್ರಸ್ತೆಯನ್ನು ಈತನೇ ಕಾರಿನಲ್ಲಿ ಕರೆದೊಯ್ದಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಜಿತ್ಗೆ ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು, ಪ್ರಜ್ವಲ್ ರೇವಣ್ಣ ಏಪ್ರಿಲ್27 ರಂದು ಜರ್ಮನಿಗೆ ತೆರಳುವಾಗ ಕೂಡ ಅಜಿತ್ ಕಾರು ಚಾಲಕನಾಗಿದ್ದ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಭವಾನಿ ರೇವಣ್ಣಗೆ SIT 3ನೇ ನೋಟಿಸ್ ಕೊಟ್ಟಿದೆ. ಈಗಾಗಲೇ ಎರಡು ಬಾರಿ ಭವಾನಿ ರೇವಣ್ಣಗೆ ನೋಟಿಸ್ ನೀಡಿರುವ SIT, 3ನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
ಇದನ್ನೂ ಓದಿ : ಬಿಜೆಪಿ ಶಾಸಕ ಹರೀಶ್ ಪೂಂಜಾ ಠಾಣೆಗೆ ಹಾಜರ್ – ವಿಚಾರಣೆ ಬಳಿಕ ಸ್ಟೇಷನ್ ಬೇಲ್ ಮೇಲೆ ರಿಲೀಸ್..!