ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.
ಇದೀಗ ಪೊಲೀಸ್ ಕಸ್ಟಡಿಯಲ್ಲಿ ಒಂದು ರಾತ್ರಿ ಕಳೆದಿರುವ ನಟ ದರ್ಶನ್, ಅಯ್ಯ.. ಅಣ್ಣ.. ನನಗೊಂದು ಸಿಗರೇಟ್ ಕೊಡಿ. ಸಾರ್.. ನನಗೆ ಇರಕ್ಕಾಗಲ್ಲ ತಲೆಯೆಲ್ಲಾ ಕೆಟ್ಟೋಗುತ್ತೆ.. ಸಿಡಿದೋಗುತ್ತೆ ಎಂದು ಕಾನ್ಸ್ಟೇಬಲ್ಗಳ ಬಳಿ ಗೋಗರೆಯುತ್ತಿದ್ದಾರೆ.
ದಿನಕ್ಕೆ ನಾಲ್ಕೈದು ಸಿಗರೇಟ್ ಪ್ಯಾಕ್ ಸುಟ್ಟು ಅಭ್ಯಾಸವಿರೋದ್ರಿಂದ ಬೆಳಗ್ಗೆ ಎದ್ದಾಗಿಂದಲೂ ಮುಖ ತೊಳೆಯದೇ ಸಿಗರೇಟ್ ಕೇಳ್ತಿರೋ ನಟ ದರ್ಶನ್, ಊಟ ಕೊಟ್ಟಿಲ್ಲಾ ಅಂದ್ರು ಪರ್ವಾಗಿಲ್ಲ.. ಜ್ಯೂಸ್ ಕೂಡಾ ಬೇಡ. ಸಿಗರೇಟ್ ಮಾತ್ರ ಮಿಸ್ ಮಾಡದೇ ಕೊಡಿ ಸಾರ್. ದಮ್ಮಯ್ಯ ನಿಮ್ಮ ಕಾಲಿಗೆ ಬಿದ್ ಬುಡ್ತೀನಿ. ಪೇಸ್ಟ್, ಬ್ರಶ್ ತಂದು ಕೊಟ್ಟಿದ್ದರೂ ಹಲ್ಲುಜ್ಜದೇ ಒಂದೇ ಒಂದು ದಮ್ ಸಾರ್ ಎಂದು ದರ್ಶನ್ ಅಂಗಲಾಚ್ತಿದ್ದಾರೆ.
ಇದನ್ನೂ ಓದಿ : ಅವನ ಪಾಪಕರ್ಮ ಅವನ ಸುಡುತ್ತದೆ – ಪರೋಕ್ಷವಾಗಿ ದರ್ಶನ್ಗೆ ಟಾಂಗ್ ಕೊಟ್ಟ ಜಗ್ಗೇಶ್..!