ತುಮಕೂರು : ಡಿ.ಕೆ.ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ. ರಾಜ್ಯದಲ್ಲಿ ಸಿದ್ದು ಪರ ಒಂದು ಅಹಿಂದ ಟೀಂ ಕೆಲಸ ಮಾಡ್ತಿದೆ. ಆ ಅಹಿಂದ ಟೀಂ & ಸಿದ್ದು ಸೇರಿ ಸುರೇಶ್ರನ್ನು ಸೋಲಿಸಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು, ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ ಸೇರಿ ಸೋಲಿಸ್ತಾರೆ ಎಂದಿದ್ದೆ. ಒಂದು ತಿಂಗಳ ಹಿಂದೆ ನಾನು ಹೇಳಿದ್ದಂತೆ ನಿಜವಾಗಿದೆ. 2 ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಅಂತಾ ಹೇಳಿದ್ದೆ.ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಇದು ಡಿ.ಕೆ.ಶಿವಕುಮಾರ್ ಸಿಎಂ ಆಗಬಾರದು ಎನ್ನುವ ಸಂಚಿನ ಭಾಗ. ಡಿಕೆಶಿ ಮುಖ್ಯಮಂತ್ರಿ ಆಗದಿದ್ರೆ ಈ ಸರ್ಕಾರ ಉಳಿಯಲ್ಲ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭ ಆಗುತ್ತೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : ಭೋವಿ ನಿಗಮದ ಹಗರಣ – ಗೂಳಿಹಟ್ಟಿ ಶೇಖರ್ ಮತ್ತೊಂದು ಸ್ಫೋಟಕ ಆಡಿಯೋ..!
Post Views: 139