ದಾವಣಗೆರೆ : ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಠಿ ಮಾಡುವ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಫಿಟ್ ಎಂದು ತಾಂಡಾ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ಜಯದೇವ್ ನಾಯ್ಕ್ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಪರವಾಗಿ ದಾವಣಗೆರೆಯಲ್ಲಿ ಬ್ಯಾಟಿಂಗ್ ಮಾಡಿದ ಜಯದೇವ್ ನಾಯ್ಕ್ ಅವರು, ಸಿಎಂ ಆಗ್ಬೇಕು ಅನ್ನೋದು ಎಲ್ಲರ ಆಸೆ ಸಹಜ. ಆದರೆ ಸಿದ್ದರಾಮಯ್ಯ ಬಡವರ ಹಸಿವನ್ನು ನೀಗಿಸಿದವರು, ಸಮರ್ಥವಾಗಿ ಆಡಳಿತ ಮಾಡಿದ್ದಾರೆ, ಉತ್ತಮ ಆಡಳಿತ ಮಾಡಿದ್ದಾರೆ ಎಮದು ತಿಳಿಸಿದ್ದಾರೆ.
ಇನ್ನು ಸಿಎಂ ಮಾಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಸಿಎಂ ಬದಲಾವಣೆ ಮಾಡುವುದು ಸುಲಭದ ವಿಚಾರವಲ್ಲ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಸಮರ್ಥವಾಗಿದ್ದಾರೆ ಎಂದು
ದಾವಣಗೆರೆಯಲ್ಲಿ ಜಯದೇವ್ ನಾಯ್ಕ್ ಹೇಳಿದ್ದಾರೆ.
ಇದನ್ನೂ ಓದಿ : ಪಾನಿಪುರಿ ಬೆನ್ನಲ್ಲೇ ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ : ಬ್ಯಾನ್ಗೆ ಚಿಂತನೆ..!
Post Views: 19