Download Our App

Follow us

Home » ರಾಜಕೀಯ » ನಮ್ಮ ಪಾತ್ರದ ಬಗ್ಗೆ ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುವೆ – ದೇವರಾಜೇಗೌಡಗೆ ಬಹಿರಂಗ ಸವಾಲ್​ ಹಾಕಿದ ಶ್ರೇಯಸ್​ ಪಟೇಲ್​​​..!

ನಮ್ಮ ಪಾತ್ರದ ಬಗ್ಗೆ ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುವೆ – ದೇವರಾಜೇಗೌಡಗೆ ಬಹಿರಂಗ ಸವಾಲ್​ ಹಾಕಿದ ಶ್ರೇಯಸ್​ ಪಟೇಲ್​​​..!

ಹಾಸನ : ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಅವರ ಆರೋಪದ ಬಳಿಕ ಪ್ರಜ್ವಲ್​​ ಪೆನ್‌ಡ್ರೈವ್ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ದೇವರಾಜೇಗೌಡ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಶ್ರೇಯಸ್​ ಪಟೇಲ್ ವಿರುದ್ಧ ಆರೋಪ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲ ಸೃಷ್ಟಿಸಿದ ದೇವರಾಜೇಗೌಡ ಅವರ ಹೇಳಿಕೆ ಇದೀಗ ಶ್ರೇಯಸ್​ ಪಟೇಲ್ ಪ್ರತಿಕ್ರಿಯಿಸಿ, ದೇವರಾಜೇಗೌಡಗೆ ಬಹಿರಂಗ ಸವಾಲ್​ ಎಸೆದಿದ್ದಾರೆ.

ಹಾಸನದಲ್ಲಿ ದಿಢೀರ್​​ ಸುದ್ದಿಗೋಷ್ಠಿ ನಡೆಸಿ ದೇವರಾಜೇಗೌಡಗೆ ಬಹಿರಂಗ ಸವಾಲ್​ ಹಾಕಿದ ಶ್ರೇಯಸ್​ ಪಟೇಲ್​​​ ಅವರು, ಪೆನ್​ಡ್ರೈವ್​​​​ ಕೇಸ್​ನಲ್ಲಿ ನನ್ನ ಪಾತ್ರವಿಲ್ಲ. ನಮ್ಮ ನಾಯಕರ ಪಾತ್ರವೂ ಇಲ್ಲ. ನಮ್ಮ ಪಾತ್ರದ ಬಗ್ಗೆ ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುವೆ. ಹಾಸನ ಕ್ಷೇತ್ರದಲ್ಲಿ ಗೆದ್ದರೂ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ನೇರವಾಗಿ ಸಾವಲು ಹಾಕಿದ್ದಾರೆ.

ದೇವರಾಜಗೌಡ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ತಾನು ಬಚಾವ್​ ಆಗಲು ಇನ್ನೊಬ್ಬರ ಮೇಲೆ ಆರೋಪವನ್ನು ಹಾಕುತ್ತಿದ್ದಾರೆ. ಹೊಳೆ ನರಸೀಪುರ ಸರ್ಕಲ್​​​ನಲ್ಲಿ ಎಲ್ಲಾ ಬಯಲು ಮಾಡುವೆ ಎಂದಿದ್ಯಾರು. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ಇವರ ಆರೋಪ. ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟೂ ಇಲ್ಲ ಎಂದು ತಿಳಿಸಿದ್ದಾರೆ.

​​ಇದನ್ನೂ ಓದಿ : ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಹೊಂದಿಲ್ಲ – ಪ್ರಜ್ವಲ್​​ ಕೇಸ್​ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here