ಬಾಗಲಕೋಟೆ : ರಂಭಾಪುರಿ ಶ್ರೀಗಳ ಕಾರ್ ಮೇಲೆ ಚಪ್ಪಲಿ ಎಸೆದ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ನಡೆದಿದೆ. ರಂಭಾಪುರಿಶ್ರೀ ಕಲಾದಗಿ ಮಠದ ಉತ್ತರಾಧಿಕಾರಿಯಾಗಿ ಕೆ.ಎಂ.ಗಂಗಾಧರ ಸ್ವಾಮೀಜಿಯನ್ನು ಆಯ್ಕೆ ಮಾಡಿದ್ದರು. ಇದನ್ನು ಕಳೆದ ಕೆಲವು ವರ್ಷಗಳ ಹಿಂದೆಯೇ ಗ್ರಾಮದ ಕೆಲವರು ವಿರೋಧಿಸಿದ್ದರು.
ಕಲಾದಗಿ ಮಠದ ವಿಚಾರ ನ್ಯಾಯಾಲಯದಲ್ಲಿದ್ದು, ಕೆಲ ದಿನಗಳ ಹಿಂದೆ ಕೆಲವರು ಶ್ರೀಗಳ ಕಾರ್ಗೆ ಕಲ್ಲು ಅಡ್ಡ ಇಟ್ಟು ಪ್ರತಿಭಟಿಸಿದ್ದರು. ಇಂದು ರಂಭಾಪುರಿ ಜಗದ್ಗುರುಗಳ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ರಂಭಾಪುರಿಶ್ರೀಗಳು ಉದಗಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರ್ಗದ ಮಧ್ಯೆ ಚಪ್ಪಲಿ ಎಸೆದಿದ್ದಾರೆ.
ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠದ ಗುರುಲಿಂಗೇಶ್ವರ ಮಠ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿದೆ.
ವಿವಾದ ಕೋರ್ಟ್ನಲ್ಲಿರುವಾಗಲೇ ಗಂಗಾಧರ ಸ್ವಾಮೀಜಿ ಮಠದ ದುರಸ್ತಿ ಕಾರ್ಯ ಹಾಗೂ ಮಠದ ಹೊಲ ಉಳುಮೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ರಂಭಾಪುರಿ ಶ್ರೀ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ಕಾಂತಾರಾ ಪ್ರೀಕ್ವೆಲ್ನಲ್ಲಿ ದೈವಾರಾಧನೆಯ ಪ್ರದರ್ಶನ ಆಗಬಾರದು : ರಿಷಬ್ ಶೆಟ್ಟಿಗೆ ಭಜರಂಗದಳ ಎಚ್ಚರಿಕೆ..!