ಮೈಸೂರು : ನಂಜನಗೂಡಿನಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸರಣಿ ಕಳ್ಳತನ ನಂಜನಗೂಡನ್ನೇ ಬೆಚ್ಚಿ ಬೀಳಿಸಿದೆ. ಮುಸುಕು ಧರಿಸಿದ ಖದೀಮರು ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಒಂದೇ ರಾತ್ರಿ ಮೂರು ಮನೆಗೆ ಕನ್ನ ಹಾಕಿರುವ ಖದೀಮರು 2.25 ಲಕ್ಷ ನಗದು, 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಈ ಚಾಲಾಕಿ ಕಳ್ಳರು ಮೂರು ಮನೆಗಳ ಬಾಗಿಲು ಮೀಟಿ ಕೃತ್ಯವೆಸಗಿದ್ದಾರೆ. ಕೃಷ್ಣಪ್ಪ ಲೇಔಟ್ನ ಸಂತೋಷ್ ಎಂಬವರ ಮನೆಯಲ್ಲಿ 1.25 ಲಕ್ಷ ಹಣ, 1.25 ಕೆಜಿ ಬೆಳ್ಳಿ, 11 ಗ್ರಾಂ ಚಿನ್ನ ಕಳವಾಗಿದೆ. ಬಸವರಾಜು ಎಂಬುವರ ಮನೆಯಲ್ಲಿ 1 ಲಕ್ಷ ಹಣ, ಕಂಪ್ಯೂಟರ್ ಮತ್ತು ಇನ್ನಿತರ ಸಾಮಗ್ರಿಗಳ ಕಳವು ಮಾಡಿದ್ದಾರೆ.
ಕಚೇರಿಯೊಂದಕ್ಕೂ ನುಗ್ಗಿ ಕಳ್ಳರು ಚೆಲ್ಲಾಪಿಲ್ಲಿ ಮಾಡಿದ್ದು, ಮನೆಯ ಬಾಗಿಲುಗಳನ್ನು ಮೀಟಿ ಕಳ್ಳತನ ನಡೆಸಿದ್ದಾರೆ. ಮುಸುಕು ಧರಿಸಿದ ಖದೀಮರು ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮಂಗಳೂರು ಬ್ಲಾಸ್ಟ್ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ : ಡಿ.ಕೆ ಶಿವಕುಮಾರ್..!