ಬೀದರ್ : ಬೀದರ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮಿರದ್ದು, ಅದನ್ನ ನಿಯಂತ್ರಣ ಮಾಡಲು ನಗರಸಭೆ ಕಳೆದ ವರ್ಷ 23ರ ಸಪ್ಟೆಂಬರ್ 20 ರಂದು ಟೆಂಡರ್ ಅಂತಿಮ ಗೊಳಸಿ ಬೀದರ್ ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಆದೇಶ್ ಹೋರಡಿಸಿದ್ದರು.
ಬೀದರ್ ನಗರಸಭೆ ವ್ಯಾಪ್ತಿಯಲ್ಲಿರುವ ಶ್ವಾನಗಳ ಸಂತಾನ ಹರಣ ಶಾಸ್ತ್ರ ಚಿಕಿತ್ಸೆ ಮತ್ತು ಬೀದಿ ನಾಯಿಗಳಿಗೆ ರಬೀಸ್ ಚುಚ್ಚುಮದ್ದು ಮಾಡಲು ಮಾನವ ವಿಕಾಸ ಕೇಂದ್ರಕ್ಕೆ ಈ ಟೆಂಡರ್ ನೀಡಲಾಗಿತ್ತು. ಪ್ರತಿಯೊಂದು ಬೀದಿನಾಯಿಗೆ ಇದಕ್ಕಾಗಿ 500ರೂ. ನಿಗದಿ ಮಾಡಲಾಗಿತ್ತು. ಬೀದರ್ ನಗರದಲ್ಲಿ ಒಂದರಲ್ಲೆ ನಗರಸಭೆ ಅಧಿಕಾರಿಗಳು ಹೇಳುವ ಪ್ರಕಾರ ಬೀದಿ ನಾಯಿಗಳ ಸಂಖ್ಯೆ ಸರಿ ಸುಮಾರು ಆರು ಸಾವಿರ ಆಸುಪಾಸು ಇದೆ.
ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಟೆಂಡರ್ ಪಡೆದ ಮಾನವ ವಿಕಾಸ ಕೇಂದ್ರ ಬೀದಿಗಿಳಿದು ಈ ಬೀದಿನಾಯಿಗಳನ್ನ ಹಿಡಿಯಲು ಮುಂದಾಗಿದೆ. ಜ.31ರಂದು ಸರಿ ಸುಮಾರು 50ಕ್ಕು ಹೆಚ್ಚಿನ ನಾಯಿಗಳನ್ನ ಸೆರೆ ಹಿಡಿದಿದೆ.ಇವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡೋ ಬದಲು ಬೀದಿ ನಾಯಿಗಳಿಗೆ ಎರಡು ಕಡೆ ಹಗ್ಗ ಕಟ್ಟಿ ಅವುಗಳಿಗೆ ನೆಲಕ್ಕೆ ಎತ್ತಿ ಎತ್ತಿ ಬಡಿದು ಅವುಗಳಿಗೆ ಹಿಂಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಗರಸಭೆ ವಿರುದ್ದ ಪ್ರಾಣಿ ಪ್ರಿಯರ ಅಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಬೀದರ್ ನಗರಸಭೆಗೆ ದೂರು ಹೋಗಿದ್ದೆ ತಡ ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಜ.31 ರಂದು ಟೆಂಡರ್ ಪಡೆದ ಮಾನವ ವಿಕಾಸ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದರೆ. ಫೆ.1ರಂದು ಬೀದಿ ನಾಯಿಗಳಿಗೆ ಹಿಂಸೆ ನೀಡಿ ಕೊಂದ ಮಾನವ ವಿಕಾಸ ಕೇಂದ್ರದ ಟೆಂಡರ್ ರದ್ದು ಮಾಡಿ ಸಂಸ್ಥೆಯನ್ನ ಕಪ್ಪು ಪೆಟ್ಟಿಗೆ ಸೇರಿಸಿ ಆದೇಶ್ ಹೊರಡಿಸಿದ್ದಾರೆ.
ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಹೊರಡಿಸುವ ಆದೇಶದಲ್ಲಿ ಏನಿದೆ?
ಬೀದರ್ ನಗರದ ವ್ಯಾಪ್ತಿಯಲ್ಲಿ ಬರೋ ಬೀದಿನಾಯಿಗಳಿಗೆ ಸಂತಾಮಹರಣ ಶಸ್ತ್ರಚಿಕಿತ್ಸೆ ಮಾಡಿ ಅವುಗಳಿಗೆ ಎಂಟಿ ರಾಬಿಸ್ ಚುಚ್ಚುಮದ್ದು ನೀಡಿ ಮತ್ತೆ ಅವುಗಳನ್ನ ಅಲ್ಲೆ ಬಿಡಬೇಕಿತ್ತು.ಆದ್ರೆ ಆದೇಶ್ ಉಲ್ಲಂಘನೆ ಮಾಡಿ ಬೀದಿನಾಯಿಗಳಿಗೆ ಅವೈಜ್ಞಾನಿಕ ರೀತಿಯಲ್ಲಿ ಹಿಡಿದು ಅವುಗಳಿಗೆ ಚಿತ್ರ ಹಿಂಸೆ ನೀಡಿದ್ದು ದೂರುಗಳು ಬಂದಿವೆ.ಈ ಹಿನ್ನೆಲೆಯಲ್ಲಿ ನಿಮ್ಮ ಟೆಂಡರ್ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಲು ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಬೀದಿನಾಯಿಗಳಿಗೆ ಹಿಂಸೆ ನೀಡಿ ಅವುಗಳ ಸಾವಿಗೆ ಕಾರಣಚಾದ ಸಂಸ್ಥೆಯ ವಿರುದ್ದ ನಗರಸಭೆ ಕ್ರಮ ಜರುಗಿಸಿದೆ.
ಆದ್ರೆ ಬೀದಿನಾಯಿಗಳಿಗೆ ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ಅವುಗಳಿಗೆ ಆಂಟಿ ರಾಬಿಸ್ ಚುಚ್ಚು ಮದ್ದು ಕೊಡೋದು ಬಿಟ್ಟು ಬೀದಿನಾಯಿಗಳಿಗೆ ನೆಲಕ್ಕೆ ಎತ್ತೆತ್ತಿ ಬಡಿದು ಮಾತ್ರ ಪ್ರಾಣಿ ಪ್ರಿಯರ್ ಆಕ್ರೋಶ ಕ್ಕೆ ಕಾರಣವಾಗಿದೆ.ಈ ಹಿಂದೆ ಕೂಡಾ ಬೀದರ್ ನಗರಸಭೆ ಬೀದಿ ನಾಯಿಗಳಿಗೆ ಸೈನಡ್ ಇಂಜೆಕ್ಷನ್ ಕೊಟ್ಟು ನಾಯಿಗಳ ಮಾರಣ ಹೋಮ ಮಾಡಿತ್ತು..ಇಗ ಮತ್ತೆ ಬೀದಿನಾಯಿಗಳಿಗ ಹಾವಳಿ ನಿಯಂತ್ರಿಸುವ ಭರದಲ್ಲಿ ಅವುಗಳಿಗೆ ಹಿಂಸೆ ನೀಡಿದ್ದು ಅಕ್ರೋಶಕ್ಕೆ ಕಾರಣವಾಗಿದೆ.ಮಾನವ ವಿಕಾಸ ಕೇಂದ್ರಕ್ಕೆ ಕಪ್ಪು ಪೆಟ್ಟಿಗೆ ಸೇರಿಸುವುದರ ಜೊತೆಗೆ ಅದರ ಮೇಲೆ ಕ್ರಿಮಿನಲ್ ಕೆಸ್ ದಾಖಲಿಸಬೇಕು ಅಂತಾರೆ ಹೋರಾಟಗಾರ ಶಿವಕುಮಾರ ತುಂಗಾ..
ಇದನ್ನೂ ಓದಿ : ರಾಜ್ಯಾದ್ಯಂತ ಲೋಕಾಯುಕ್ತ ದಾಳಿ : ಹತ್ತು ಅಧಿಕಾರಿಗಳ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ.. ಏನೆಲ್ಲಾ ವಶಕ್ಕೆ? ಇಲ್ಲಿದೆ ವಿವರ..!