ಮೈಸೂರು : ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಗಂಧದ ಕಡ್ಡಿ ತಯಾರಿಕಾ ಘಟಕ ಹೊತ್ತಿ ಉರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ನಂಜನಗೂಡಿನ ಉರ್ದು ಸ್ಕೂಲ್ ಹಿಂಭಾಗದ ರಫೀಕ್ ಎಂಬುವರಿಗೆ ಸೇರಿದ ಗಂಧದಕಡ್ಡಿ ತಯಾರಿಕ ಘಟಕ ಭಸ್ಮವಾಗಿದೆ.
ಬೆಳಿಗ್ಗೆ 5 ಗಂಟೆ ಸಮಯಕ್ಕೆ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿ ಮೆಷಿಯನ್ಗಳಿಗೂ ಹರಡಿದೆ. ಗಂಧದಕಡ್ಡಿ ತಯಾರು ಮಾಡುವ ಉತ್ಪನ್ನಗಳು, ಗಂಧದಕಡ್ಡಿ ಸುಟ್ಟುಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿ ಗೃಹಪಯೋಗಿ ವಸ್ತುಗಳು ಭಸ್ಮವಾಗಿವೆ. ಕೂಡ್ಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಮನೆ ಪಕ್ಕದಲ್ಲಿ ಕಸ ಹಾಕ್ಬೇಡಿ ಎಂದಿದ್ದಕ್ಕೆ ಹ*ಲ್ಲೆ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!
Post Views: 50