ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿಗೆ ರೌಡಿ ನಾಗನ ಹೆಸರು ಹೇಳಿ ಧಮ್ಕಿ ಹಾಕಿದ್ದಾನೆ. ಬಿಲ್ಡರ್ಗೆ ನಾಗನ ಸಹಚರ ಬ್ಲಾಕ್ ಬಾಲ ಕನ್ಸ್ಟ್ರಕ್ಷನ್ ಉದ್ಯಮಿ ರಾಘವಪ್ಪ ಮೂರ್ತಿಗೆ ಜಾಗವನ್ನು ತಮ್ಮ ಹೆಸರಿಗೆ ಬರೆದುಕೊಡಬೇಕು ಎಂದು ಧಮ್ಕಿ ಹಾಕಿದ್ದಾನೆ.
ಪ್ರತಿ ತಿಂಗಳೂ ನಮಗೆ ಮಂತ್ಲಿ ಕೊಡಬೇಕು, ಹಫ್ತಾ ಕೊಡದೇ ಇದ್ರೆ ನಿಮ್ಮ ಫ್ಯಾಮಿಲಿ ಮುಗಿಸ್ತೇವೆ ಎಂದು ಬ್ಲಾಕ್ ಬಾಲ ವಾರ್ನಿಂಗ್ ಕೊಟ್ಟಿದ್ದಾನೆ. ಸಹಚರರು ವಿಲ್ಸನ್ ಗಾರ್ಡನ್ ನಾಗನಿಂದ ಪ್ರೆಶರ್ ಇದೆ ಎಂದಿದ್ದು, ಹೊಂಗಸಂದ್ರದ ಸೈಟ್ ತಮ್ಮ ಹೆಸರಿಗೆ ಬರೆದುಕೊಡುವಂತೆ ಧಮ್ಕಿ ಬ್ಲಾಕ್ ಬಾಲ ಹಾಕಿದ್ದಾನೆ. ಮುತ್ತು ಎಂಬಾತ ಪದೇ ಪದೇ ಕರೆ ಮಾಡಿ ಧಮ್ಕಿ ಹಾಕ್ತಿದ್ದ, ವಿಲ್ಸನ್ ಗಾರ್ಡನ್ ನಾಗನ ಸಹಚರ ಬ್ಲಾಕ್ ಬಾಲ ಟೀಂನಿಂದ ಬೆದರಿಕೆ ಬಂದಿದೆ. ಮನೆಯವರನ್ನು ಕಿಡ್ನಾಪ್ ಮಾಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.
ಮಹೇಶ್ ಮರ್ಡರ್ ಕೇಸ್ನಲ್ಲಿ ಜೈಲು ಸೇರಿರುವ ವಿಲ್ಸನ್ ಗಾರ್ಡನ್ ನಾಗ ಇದೀಗ ಜೈಲಿಂದ್ಲೇ ಆಪರೇಟ್ ಮಾಡ್ತಿದ್ದಾನೆ. ರಿಮೋಟ್ ರೌಡಿಯಾಗಿ ವಿಲ್ಸನ್ ಗಾರ್ಡನ್ ನಾಗ ಆ್ಯಕ್ಟೀವ್ ಆಗ್ತಿದ್ದಾನಾ ಅನ್ನೊ ಪ್ರಶ್ನೆ ಹುಟ್ಟಿಕೊಂಡಿದ್ದು, ಮಡಿವಾಳ ಠಾಣೆಯಲ್ಲಿ ವಿಲ್ಸನ್ ಗಾರ್ಡನ್ ನಾಗ ಮತ್ತು ಸಹಚರರ ವಿರುದ್ದ FIR ದಾಖಲಾಗಿದೆ.
ಇದನ್ನೂ ಓದಿ : ಇನ್ಮುಂದೆ ಹೊಸ ಅಧ್ಯಾಯದೊಂದಿಗೆ ಬರಲಿದೆ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ..!