ಬೆಂಗಳೂರು : ಕಾವೇರಿ ಪೈಪ್ ಲೈನ್ ಒಡೆದು ಮನೆಯೊಳಗೆ ನುಗ್ಗಿದ ನೀರು ಘಟನೆ ಬನಶಂಕರಿ 5ನೇ ಅಂತ ವಸಂತಪುರದಲ್ಲಿ ನಡೆದಿದೆ. BWSSB ನಿರ್ಲಕ್ಷ್ಯದಿಂದ ನಿವಾಸಿಗಳು ಪರದಾಡುವಂತಹ ಸ್ಥಿತಿ ಎದುರಾಗಿದೆ.
ಬನಶಂಕರಿ 5ನೇ ಅಂತ ವಸಂತಪುರದಲ್ಲಿ ಕಾವೇರಿ ಪೈಪ್ ಲೈನ್ ಒಡೆದು ನೀರು ಚಿಮ್ಮಿದೆ. ಕುಡಿಯುವ ನೀರಿನ ರಭಸಕ್ಕೆ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಅಲ್ಲದೇ, ಮನೆಯೊಳಗೆ ನೀರು ನುಗ್ಗಿದೆ. ತಕ್ಷಣ ಸ್ಥಳೀಯರು BWSSBಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಗಳು ನೀರು ಬಂದ್ ಮಾಡಿದ್ದಾರೆ.
ಆದರೆ BWSSB ನಿರ್ಲಕ್ಷ್ಯದಿಂದ ಮನೆಯೊಳಗೆ ನುಗ್ಗಿದ ನೀರಿನಿಂದಾಗಿ ಸಮಸ್ಯೆ ಎದುರಾಗಿದ್ದು, ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನು ಜಲಮಂಡಳಿ ಬೇಜವಾಬ್ದಾರಿ ತನಕ್ಕೆ ಸ್ಥಳಿಯರು ಅಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಆಸ್ತಿ ನೋಂದಣಿ ಕಾರ್ಯ ಪುನರಾರಂಭ – ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ದಯಾನಂದ ಸ್ಪಷ್ಟನೆ..!
Post Views: 27