Download Our App

Follow us

Home » ಅಪರಾಧ » 17ಕ್ಕೆ ಏರಿಕೆಯಾಯ್ತು ರೇಣುಕಾಸ್ವಾಮಿ ಹಂತಕರ ಸಂಖ್ಯೆ – ಒಂದು ಕೊಲೆ ಕೇಸ್​ನಲ್ಲಿ ಇಷ್ಟೊಂದು ಆರೋಪಿಗಳಾ?

17ಕ್ಕೆ ಏರಿಕೆಯಾಯ್ತು ರೇಣುಕಾಸ್ವಾಮಿ ಹಂತಕರ ಸಂಖ್ಯೆ – ಒಂದು ಕೊಲೆ ಕೇಸ್​ನಲ್ಲಿ ಇಷ್ಟೊಂದು ಆರೋಪಿಗಳಾ?

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಆದರೆ ದರ್ಶನ್​​​​​ ಕೇಸ್​ನಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ರೇಣುಕಾಸ್ವಾಮಿ ಕೊಲೆ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ನಿನ್ನೆಯಿಂದಲೇ ಪೊಲೀಸರು 4 ಮಂದಿಯನ್ನ ಅರೆಸ್ಟ್ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದು, ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸರು 13 ಮಂದಿಯನ್ನ ಬಂಧಿಸಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದು, ಒಂದು ಕೊಲೆ ಕೇಸ್​ನಲ್ಲಿ ಇಷ್ಟೊಂದು ಆರೋಪಿಗಳಾ ಅನ್ನೊ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

ಕಿಡ್ನಾಪ್​​, ಕೊಲೆ, ಸಾಕ್ಷಿ ನಾಶ ಹೀಗೆ ಹಲವು ಆರೋಪ ಕೇಳಿಬಂದಿದ್ದು, ಪೊಲೀಸರು ಒಬ್ಬೊಬ್ಬರ ಪಾತ್ರವನ್ನ ಎಳೆ-ಎಳೆಯಾಗಿ ತನಿಖೆ ಮಾಡ್ತಿದ್ದಾರೆ. ಈಗಾಗಲೇ ಪೊಲೀಸರು ಪವಿತ್ರಾಗೌಡ A-1 ಆರೋಪಿ, ದರ್ಶನ್​​-A-2 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ದರ್ಶನ್ ಅರೆಸ್ಟ್ ಕೇಸ್ : ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಡೀಲ್ ರಹಸ್ಯ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here