ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ NIA ತಂಡ ತನಿಖೆ ಚುರುಕುಗೊಳಿಸಿದೆ. ಆರೋಪಿಯ ಪತ್ತೆಗೆ ಬಳ್ಳಾರಿ, ತುಮಕೂರಿನಲ್ಲಿ NIA ಟೀಂ ಶೋಧ ನಡೆಸಿದೆ.
ನಿನ್ನೆ ತುಮಕೂರಿನಲ್ಲಿ ತನಿಖೆ ನಡೆಸಿದ ಎನ್ಐಎ ತಂಡ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಮಾಹಿತಿ ಪಡೆದುಕೊಂಡಿದೆ. ಈ ವೇಳೆ ಅಧಿಕಾರಿಗಳಿಗೆ ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಾಥ್ ನೀಡಿದ್ದಾರೆ.
ಆರೋಪಿ ಬಾಂಬ್ ಬಾಸ್ಟ್ ನಡೆಸಿದ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದಾನೆ ಎಂಬ ಮಾಹಿತಿ ಆಧಾರವಾಗಿ ಎನ್ಐಎ ತಂಡ ತನಿಖೆ ನಡೆಸಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ, ಗೋಕರ್ಣ ಬಸ್ ಮೂಲಕ ಭಟ್ಕಳಕ್ಕೆ ತೆರಳಿದ್ದಾನೆ ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎನ್ಐಎ ಅಧಿಕಾರಿಗಳು ಬಳ್ಳಾರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಬಳ್ಳಾರಿ ಮೂಲಕ ಆಂಧಕ್ಕೂ ಪ್ರಯಾಣಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಂಧ್ರ ಪೊಲೀಸರೂ ಅಲರ್ಟ್ ಆಗಿದ್ದಾರೆ. ಬೆಂಗಳೂರಿಂದ ಎರಡು ತಂಡಗಳು ಎರಡು ಕಾರುಗಳಲ್ಲಿ ಬಂದು ತನಿಖೆ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಬಂದಿದ್ದಾರೆ. ಬಳ್ಳಾರಿಯಿಂದಲೇ ಬೇರೆಡೆ ತೆರಳಿದ ಹಿನ್ನಲೆ ಬಳ್ಳಾರಿ ನಿಲ್ದಾಣದಲ್ಲಿ ಮಾಹಿತಿ ಪಡೆದಿದ್ದಾರೆ.
ಆರೋಪಿಯ ಮತ್ತೊಂದು ಫೋಟೊ ರಿವೀಲ್ : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಮತ್ತೊಂದು ಫೋಟೊ ರಿವೀಲ್ ಆಗಿದೆ. BMTC ಬಸ್ನಲ್ಲಿ ಪ್ರಯಾಣ ಮಾಡಿದ್ದ ಫೋಟೋ ಲಭ್ಯವಾಗಿದೆ. BMTC ಬಸ್ನ ಸಿಸಿಟಿವಿಯಲ್ಲಿ ಬಾಂಬರ್ ಫೋಟೋ ಸೆರೆಯಾಗಿದೆ.
ಇದನ್ನೂ ಓದಿ : ಬೆಂಗಳೂರು ವಾಟರ್ ಟ್ಯಾಂಕರ್ ಲೂಟಿಗೆ ಬ್ರೇಕ್ : ಖಾಸಗಿ ಟ್ಯಾಂಕರ್ಗಳಿಗೆ ರೇಟ್ ಫಿಕ್ಸ್ ಮಾಡಿದ ಜಿಲ್ಲಾಡಳಿತ..!