ಬೆಂಗಳೂರು : ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾಜ್ಯಸಭೆ ಕಾದಾಟದಲ್ಲಿ 4 ಸೀಟ್ಗೆ ಐವರು ಅಭ್ಯರ್ಥಿಗಳ ಫೈಟ್ ನಡೆಯಲಿದೆ. ನಾಲ್ಕು ಸ್ಥಾನದ ಪೈಕಿ ಕಾಂಗ್ರೆಸ್ಗೆ 3, ಬಿಜೆಪಿಗೆ 1 ಸ್ಥಾನ ಫಿಕ್ಸ್ ಆಗಲಿದೆ.
ಕಾಂಗ್ರೆಸ್ನಿಂದ ಅಜಯ್ ಮಾಕೇನ್, ಸಯ್ಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ರಾಜ್ಯಸಭೆ ಕಣದಲ್ಲಿದ್ದಾರೆ.ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧೆಗಿಳಿದಿದ್ದು, ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ವೋಟಿಂಗ್ ಆರಂಭವಾಗಲಿದ್ದು, ಸಂಜೆ 5 ಗಂಟೆ ಅಥವಾ 6 ಗಂಟೆಗೆಲ್ಲಾ ರಿಸಲ್ಟ್ ಹೊರ ಬರುತ್ತೆ.
ಶಾಸಕರು ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲಿದ್ದು, ತಲಾ ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಕಾಂಗ್ರೆಸ್ಗೆ 134+3 ಒಟ್ಟು 137 ಸದಸ್ಯರ ಬೆಂಬಲವಿದೆ. ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಹಾಗಾಗಿ ಒಟ್ಟು ಮೂವರು ಅಭ್ಯರ್ಥಿಗಳಿಗೆ 135 ಮತ ಅಗತ್ಯವಿದೆ. ಬಿಜೆಪಿ 66, ಜೆಡಿಎಸ್ 19 ಮತ ಸೇರಿದ್ರೆ 85 ಮತಗಳಾಗಲಿವೆ.
ಬಿಜೆಪಿ ಅಭ್ಯರ್ಥಿಗೆ 45 ಮತಗಳು ಚಲಾವಣೆಯಾದರೆ 21 ಮತ ಉಳಿಯುತ್ತೆ, ಉಳಿಕೆ 21 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸುವ ತಂತ್ರ ನಡೆಯಲಿದೆ.
ಬಿಜೆಪಿ ಹೆಚ್ಚುವರಿ ಮತ 21, ಜೆಡಿಎಸ್ನ 19 ಮತ ಸೇರಿದ್ರೆ 40 ಮತಗಳಾಗಲಿವೆ. ಕುಪೇಂದ್ರ ರೆಡ್ಡಿ ಗೆಲ್ಲಲು ಇನ್ನೂ ಐದು ಮತಗಳ ಅಗತ್ಯ ಇದೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ, ದರ್ಶನ್ ಪುಟ್ಟಣ್ಣಯ್ಯ ಮತಗಳೇ ನಿರ್ಣಾಯಕವಾಗಲಿದೆ. KRPPಯ ಜನಾರ್ದನರೆಡ್ಡಿ ಕಾಂಗ್ರೆಸ್ ಪರ ಮತ ಹಾಕೋದು ಫಿಕ್ಸ್ ಆಗಿದ್ದು, ಪಕ್ಷೇತರರ ಮತ ಚದುರಿದರೆ ಮಾತ್ರ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಲಿದೆ.
ಬಿಜೆಪಿ ಹೆಚ್ಚುವರಿ ಮತ 21, ಜೆಡಿಎಸ್ನ 19 ಮತ ಸೇರಿದ್ರೆ 40 ಮತಗಳಾಗಲಿವೆ. ಕುಪೇಂದ್ರ ರೆಡ್ಡಿ ಗೆಲ್ಲಲು ಇನ್ನೂ ಐದು ಮತಗಳ ಅಗತ್ಯ ಇದೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ, ದರ್ಶನ್ ಪುಟ್ಟಣ್ಣಯ್ಯ ಮತಗಳೇ ನಿರ್ಣಾಯಕವಾಗಲಿದೆ. KRPPಯ ಜನಾರ್ದನರೆಡ್ಡಿ ಕಾಂಗ್ರೆಸ್ ಪರ ಮತ ಹಾಕೋದು ಫಿಕ್ಸ್ ಆಗಿದ್ದು, ಪಕ್ಷೇತರರ ಮತ ಚದುರಿದರೆ ಮಾತ್ರ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಲಿದೆ.
ಇದನ್ನೂ ಓದಿ : ‘ಹೈಡ್ ಆ್ಯಂಡ್ ಸೀಕ್’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್..!
Post Views: 219