Download Our App

Follow us

Home » ರಾಷ್ಟ್ರೀಯ » ರಾಜ್ಯಸಭೆಗೆ ಡಾ. ಸುಧಾಮೂರ್ತಿ ನಾಮ ನಿರ್ದೇಶನ : ಶುಭಕೋರಿದ ಪ್ರಧಾನಿ ಮೋದಿ..!

ರಾಜ್ಯಸಭೆಗೆ ಡಾ. ಸುಧಾಮೂರ್ತಿ ನಾಮ ನಿರ್ದೇಶನ : ಶುಭಕೋರಿದ ಪ್ರಧಾನಿ ಮೋದಿ..!

ಮಹಿಳಾ ದಿನಾಚರಣೆಯಂದೇ ಡಾ. ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು  ಟ್ವೀಟ್​-Xನಲ್ಲಿ ನಾಮನಿರ್ದೇಶನದ ಸಂತಸ ಹಂಚಿಕೊಂಡಿದ್ದಾರೆ.

ಇನ್ಫೋಸಿಸ್​ ಪ್ರತಿಷ್ಠಾನದ ಸುಧಾಮೂರ್ತಿಗೆ ಪ್ರಧಾನಿ ಮೋದಿ ಈ ಮೂಲಕ ಮಹಿಳಾ ದಿನಾಚರಣೆಯ ಬಿಗ್ ಗಿಫ್ಟ್​ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​-X ಮಾಡಿ, ಸಮಾಜಕ್ಕೆ ಸುಧಾಮೂರ್ತಿಯವರ ಕೊಡುಗೆ ಅಪಾರವಾಗಿದೆ. ಶಿಕ್ಷಣ ಮತ್ತು ಪರೋಪಕಾರಕ್ಕೆ ಅವರ ಕೊಡುಗೆ ಅಗಣ್ಯ, ಸುಧಾಮೂರ್ತಿಯವರ ಸೇವೆ ಅನುಕರಣಿಯ. ನಾರಿಶಕ್ತಿಯ ಪ್ರೇರಕವಾಗಿ ಸುಧಾಮೂರ್ತಿ ನಿಲ್ಲುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ, ದೇಶವನ್ನ ನಿರ್ಮಿಸುವಲ್ಲಿ ಮಹಿಳಾ ಶಕ್ತಿ ಅತ್ಯಗತ್ಯ, ದೇಶಕ್ಕೆ ಹೊಸ ಸ್ವರೂಪ ನೀಡುವ ಪ್ರಯತ್ನದಲ್ಲಿ ಸಹಕಾರಿಯಾಗಲಿ. ಸುಧಾಮೂರ್ತಿಯವರ ಸಂಸತ್​​ ಜರ್ನಿಗೆ ನನ್ನ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರ ನಿಷೇಧ : ಸರ್ಕಾರ ಆದೇಶ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here