Download Our App

Follow us

Home » ಜಿಲ್ಲೆ » 12 ಕೋಟಿ ವಂಚನೆ : ಬಾಗಲಕೋಟೆಯ ಡಿಸಿಸಿ ಬ್ಯಾಂಕ್ ವಿರುದ್ಧ ರೈತರು ಹಾಗೂ ಗ್ರಾಹಕರಿಂದ ಪ್ರೊಟೆಸ್ಟ್..!

12 ಕೋಟಿ ವಂಚನೆ : ಬಾಗಲಕೋಟೆಯ ಡಿಸಿಸಿ ಬ್ಯಾಂಕ್ ವಿರುದ್ಧ ರೈತರು ಹಾಗೂ ಗ್ರಾಹಕರಿಂದ ಪ್ರೊಟೆಸ್ಟ್..!

ಬಾಗಲಕೋಟೆಯ : ಬಾಗಲಕೋಟೆಯ ಅಮೀನಗಢ ಡಿಸಿಸಿ ಬ್ಯಾಂಕ್ ವಿರುದ್ಧ ನೂರಾರು ರೈತರು ಹಾಗೂ ಗ್ರಾಹಕರು ಪ್ರೊಟೆಸ್ಟ್​ ನಡೆಸಿದ್ದಾರೆ. ಬ್ಯಾಂಕ್​​ನಲ್ಲಿ 12 ಕೋಟಿ ವಂಚನೆ ನಡೆದಿದೆ ಎಂದು ಆರೋಪ ಕೇಳಿಬಂದಿದ್ದು, ಅಮೀನಗಡ ಡಿಸಿಸಿ ಬ್ಯಾಂಕ್ ಶಾಖೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಕಳೆದ 3 ವರ್ಷದ ಹಿಂದೆ ಕ್ಲರ್ಕ್​​​​ ಪ್ರವೀಣ ಪತ್ರಿ ಎಂಬುವನಿಂದ ವಂಚನೆ ನಡೆದಿದ್ದು, ಆತ ವಿವಿಧ ಶಾಖೆಗಳ ಬ್ಯಾಂಕ್ ಮ್ಯಾನೇಜರ್​​​​ಗಳ ಐಡಿ ಪಾಸ್ವರ್ಡ್​ ಬಳಸಿ ವಂಚನೆ ಮಾಡಿದ್ದಾನೆ. ವಿವಿಧ ಅಕೌಂಟ್​ಗಳಿಂದ ಕೋಟಿ-ಕೋಟಿ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ಡಿಸಿಸಿ ಬ್ಯಾಂಕ್​​​​ ಉಳಿತಾಯ ಖಾತೆ ದುರ್ಬಳಕೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಗ್ರಾಹಕರು, ರೈತರಿಗೆ ಅನ್ಯಾಯವಾಗಿದೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಸಿಐಡಿ ಅಧಿಕಾರಿಗಳು ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬ್ಯಾಂಕ್ ಆಡಳಿತ ಮಂಡಳಿ, ಖಾತೆದಾರರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಪ್ರವೀಣ ಪತ್ರಿ ಸಿನಿಮಾ ಅಲ್ಬಂ ನಿರ್ಮಾಣ, ಹೆಲಿಕಾಪ್ಟರ್​​​​ನಲ್ಲಿ ಸುತ್ತಾಡಿದ್ದ.

ಇದನ್ನೂ ಓದಿ : ಯಾದಗಿರಿ : ಹೋಟೆಲ್​ನ ಮಿನರಲ್​ ವಾಟರ್​​ ಬಾಟಲ್​​ನಲ್ಲಿ ಜೇಡ ಪತ್ತೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here