Download Our App

Follow us

Home » ರಾಜಕೀಯ » ಪ್ರಾಸಿಕ್ಯೂಷನ್​ ಸಂಕಷ್ಟ ಹೊತ್ತಲ್ಲೇ ರಾಯರ ಸನ್ನಿಧಿಗೆ ಸಿಎಂ..!

ಪ್ರಾಸಿಕ್ಯೂಷನ್​ ಸಂಕಷ್ಟ ಹೊತ್ತಲ್ಲೇ ರಾಯರ ಸನ್ನಿಧಿಗೆ ಸಿಎಂ..!

ಬೆಂಗಳೂರು : ಮೈಸೂರಿನ ಮುಡಾ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರು ನಿನ್ನೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರೋದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇನ್ನೊಂದೆಡೆ ರಾಜ್ಯಪಾಲರ ​ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಸಿದ್ದು ತಯಾರಿ ನಡೆಸುತ್ತಿದ್ದಾರೆ. ​

ಇನ್ನು, ಪ್ರಾಸಿಕ್ಯೂಷನ್‌ ಸಂಕಷ್ಟದ ಹೊತ್ತಲ್ಲೇ ನಾಳೆ ರಾಯರ ಸನ್ನಿಧಿಗೆ ಸಿಎಂ ಭೇಟಿ ನೀಡುತ್ತಿದ್ದಾರೆ. ವಿಶೇಷವೆಂದರೆ ಸಿಎಂ ಸಿದ್ದು ಇದೇ ಮೊದಲ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡ್ತಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಆ.18 ರಿಂದ ಆರಂಭವಾಗಿ ಆ.24ವರೆಗೆ ಆಯೋಜಿಸಲಾಗಿದ್ದು, ನಾಳೆ ನಡೆಯುವ ಸಪ್ತರಾತ್ರೋತ್ಸವದಲ್ಲಿ ಸಿಎಂ ಸಿದ್ದು ಭಾಗಿಯಾಗಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆಯಲಿದ್ದು, ಸಂಕಷ್ಟ ನಿವಾರಣೆಗಾಗಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಸಿಎಂ ಸಿದ್ದು ಬೆಂಬಲಿಸಿ ನಾಳೆ ರಾಜ್ಯಾದ್ಯಂತ ಬೃಹತ್​ ಹೋರಾಟ – ಪೊಲೀಸರು ಹೈ ಅಲರ್ಟ್..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here