ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆಶಿ ವಿರುದ್ಧ ಹೆಚ್ಡಿಕೆ ನೇರಾನೇರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಪೆನ್ಡ್ರೈವ್ ಲೀಕ್ನಲ್ಲಿ ಮಹಾನ್ ನಾಯಕನ ಕೈವಾಡ ಇದೆ, ಮಹಾನ್ ನಾಯಕರೇ ಹೆಣ್ಣು ಮಕ್ಕಳ ಗೌರವ ಕಾಪಾಡೋದು ಹೀಗೇನಾ..? ನಮ್ಮ-ನಿಮ್ಮ ಯುದ್ಧದ ಮಧ್ಯೆ ಆ ಹೆಣ್ಣು ಮಕ್ಕಳ ಮಾನ ಯಾಕ್ ತೆಗೀತೀರಾ..? ಪ್ರಜ್ವಲ್ ಪೆನ್ಡ್ರೈವ್ಗೂ ದೇವೇಗೌಡರಿಗೂ, ನನಗೂ ಏನ್ ಸಂಬಂಧ..? ಎಂದು ಕಿಡಿ ಕಾರಿದ್ದಾರೆ.
ನರೇಂದ್ರ ಮೋದಿಯವರಿಗೆ ಯಾಕ್ ಪೆನ್ಡ್ರೈವ್ ಲಿಂಕ್ ಮಾಡ್ತೀರಾ..? ರಾಜಕೀಯಕ್ಕಾಗಿ ಇಂಥಾ ಕೀಳುಮಟ್ಟಕ್ಕೆ ಇಳಿಯೋದಾ..? ಸಾವಿರಾರು ಪೆನ್ಡ್ರೈವ್ ಫ್ಯಾಕ್ಟರಿ ಮಾಡಿದ್ದು ಯಾರು..? ಪೆನ್ಡ್ರೈನ್ ಮಾಡೋದು ನಮ್ಮ ಜಾಯಮಾನ ಅಲ್ಲ, ಇಂಥಾದ್ದನ್ನೆಲ್ಲಾ ಮಾಡೋದು ನಿಮ್ಮ ಸಂಸ್ಕೃತಿ ಎಂದು ಡಿಕೆಶಿ ವಿರುದ್ಧ ಹೆಚ್ಡಿಕೆ ಕೆಂಡ ಕಾರಿದ್ದಾರೆ.
ಇದನ್ನೂ ಓದಿ : ಪೆನ್ಡ್ರೈವ್ ಕೇಸ್ : ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು..!