ಬೆಂಗಳೂರು : ಪ್ರಜ್ವಲ್ ರೇವಣ್ಣ ಎಲ್ಲೇ ಇದ್ರೂ ಬರಲೇಬೇಕು. ಎಲ್ಲಿ ಹೋಗ್ತಾರೆ.. ಇವತ್ತಲ್ಲಾ ನಾಳೆ ಬರಲೇಬೇಕು. ರೇವಣ್ಣಗೆ ಇವತ್ತು ಸಂಜೆವರೆಗೂ ಸಮಯ ಇದೆ. ಸಂಜೆಯೊಳಗೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಬರದೇ ಇದ್ರೆ SIT ತನ್ನ ಕ್ರಮ ಜರುಗಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಹೆಚ್.ಡಿ.ರೇವಣ್ಣ, ಪ್ರಜ್ವಲ್ಗೆ ಲುಕ್ ಔಟ್ ನೋಟಿಸ್ ಕೊಡಲಾಗಿದೆ.
ರೇವಣ್ಣ ಕೂಡಾ ವಿದೇಶಕ್ಕೆ ಹೋಗೋ ಪ್ಲಾನ್ ಮಾಡಿದ್ರು. ಹೀಗಾಗಿ SIT ಲುಕ್ಔಟ್ ನೋಟಿಸ್ ಕೊಡಲಾಗಿದೆ.
ಮೈಸೂರು ಕಿಡ್ನಾಪ್ ಕೇಸ್ನಲ್ಲಿ ಬೇಲ್ಗೆ ಅರ್ಜಿ ಹಾಕಿರಬಹುದು. ಆದರೆ ಪ್ರಜ್ವಲ್ ಬೆಂಗಳೂರಿಗೆ ಬಂದ ಕೂಡಲೇ ಬಂಧನ ಆಗುತ್ತೆ. ಪ್ರೊಸೀಜರ್ ಪ್ರಕಾರ ಎಲ್ಲಾ ಕ್ರಮ ಆಗುತ್ತೆ ಎಂದು ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಪೆನ್ಡ್ರೈವ್ ಕೇಸ್ನಲ್ಲಿ ಡಿಕೆಶಿ-ಹೆಚ್ಡಿಕೆ ನಡುವೆ ಬಿಗ್ ಫೈಟ್..!