Download Our App

Follow us

Home » ಅಪರಾಧ » ಪ್ರಜ್ವಲ್​​ ಗೆಲ್ಲುವ ಮುನ್ಸೂಚನೆ ಸಿಗ್ತಿದ್ದಂತೆ SITಗೆ ಟೆನ್ಷನ್​​​ – ರಿಸಲ್ಟ್​ ಬರುವ ಮುನ್ನವೇ ಸ್ಥಳ ಮಹಜರ್​ಗೆ ಪ್ಲಾನ್​​​..!

ಪ್ರಜ್ವಲ್​​ ಗೆಲ್ಲುವ ಮುನ್ಸೂಚನೆ ಸಿಗ್ತಿದ್ದಂತೆ SITಗೆ ಟೆನ್ಷನ್​​​ – ರಿಸಲ್ಟ್​ ಬರುವ ಮುನ್ನವೇ ಸ್ಥಳ ಮಹಜರ್​ಗೆ ಪ್ಲಾನ್​​​..!

ಬೆಂಗಳೂರು : ಪ್ರಜ್ವಲ್​​ ಗೆಲ್ಲುವ ಮುನ್ಸೂಚನೆ ಸಿಗ್ತಿದ್ದಂತೆ SITಗೆ ಟೆನ್ಷನ್​​​ ಶುರುವಾಗಿದೆ. ರಿಸಲ್ಟ್​ ಬರುವ ಮುನ್ನವೇ ಸ್ಥಳ ಮಹಜರ್​ ನಡೆಸಲು ಪ್ಲಾನ್​​ ಮಾಡಿರುವ ಎಸ್​​​ಐಟಿ ಯಾವುದೇ ಕ್ಷಣದಲ್ಲಿ ಪ್ರಜ್ವಲ್​ ರೇವಣ್ಣರನ್ನು ಹಾಸನಕ್ಕೆ ಕರೆದೊಯ್ದು ಮಹಜರ್ ಪ್ರಕ್ರಿಯೆ ಮುಗಿಸಲು ತಯಾರಿ ನಡೆಸಿದೆ.

ನಾಳೆ ಲೋಕಸಭೆ ರಿಸಲ್ಟ್ ಹೊರ ಬೀಳುವ ಹಿನ್ನೆಲೆ ಇಂದೇ ಮಹಜರ್​ ಪ್ರಕ್ರಿಯೆ ಮುಗಿಸಲು ತಯಾರಿ ನಡೆಸಿರುವ SIT, CID ಕಚೇರಿಯಿಂದ ಪ್ರಜ್ವಲ್​ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ಯಲಿದೆ. ಬಳಿಕ ಸಂತ್ರಸ್ತೆಯರು ದೂರಿನಲ್ಲಿ ಹೇಳಿರುವ ಸ್ಥಳಗಳಲ್ಲಿ ಮಹಜರ್ ಮಾಡಲಿದೆ.

ಸಂತ್ರಸ್ತೆಯ ದೂರಿನ ಮೇರೆಗೆ ಹೊಳೆ ನರಸೀಪುರದಲ್ಲಿರುವ ಮನೆ, ಹಾಸನದ ಗೆಸ್ಟ್​ಹೌಸ್​ ಹಾಗೂ ಸಂಸದರ ನಿವಾಸಗಳಲ್ಲಿ ಸ್ಥಳ ಪರಿಶೀಲನೆ ಮಾಡಲಿದೆ. ಈಗಾಗಲೇ ಹಾಲಿ ಹಾಸನ ಸಂಸದರಾಗಿರುವ ಪ್ರಜ್ವಲ್​ ರೇವಣ್ಣ ಬಂಧನದ ಮಾಹಿತಿಯನ್ನು ಲೋಕಸಭೆ ಸ್ಪೀಕರ್​ಗೆ ಇ-ಮೇಲ್, ಕರ್ನಾಟಕ ಭವನ ರೆಸಿಡೆಂಟ್ ಕಮಿಷನರ್ ಮೂಲಕ ರವಾನೆ ಮಾಡಲಾಗಿದೆ.

​​ ಇದನ್ನೂ ಓದಿ : ಬೆಂಗಳೂರಿಗರೇ ಇಂದೂ ಅಬ್ಬರಿಸುತ್ತೆ ಮಳೆ – ಮರದ ಕೆಳಗೆ ಬೈಕ್​, ಕಾರು ನಿಲ್ಲಿಸೋ ಮುನ್ನ ಎಚ್ಚರ..!

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here