Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕೊ*ಲೆ ಕೇಸ್ : ಪವಿತ್ರಗೌಡ ಚಪ್ಪಲಿಗಾಗಿ ಪೊಲೀಸರ ಶೋಧ..!

ರೇಣುಕಾಸ್ವಾಮಿ ಕೊ*ಲೆ ಕೇಸ್ : ಪವಿತ್ರಗೌಡ ಚಪ್ಪಲಿಗಾಗಿ ಪೊಲೀಸರ ಶೋಧ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನದಲ್ಲಿರುವ ನಟ ದರ್ಶನ್ &​ ಗ್ಯಾಂಗ್‌ ಅನ್ನು ನಿನ್ನೆ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ದರ್ಶನ್ &​ ಗ್ಯಾಂಗ್‌ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿತ್ತು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಇದೀಗ ಪವಿತ್ರಗೌಡ ಚಪ್ಪಲಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪವಿತ್ರ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಳು. ಹಾಗಾಗಿ ಪವಿತ್ರಗೌಡ ಮನೆಯಲ್ಲೂ ಮಹಜರ್​ಗೆ ತಯಾರಿ ನಡೆಸುತ್ತಿದ್ದಾರೆ. ಮಹತ್ವದ ಸಾಕ್ಷಿ ಸೀಜ್ ಮಾಡಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಪವಿತ್ರ ಮನೆಗೆ ಹೋಗಿದ್ದಳು. ಪವಿತ್ರ ಗೌಡನೇ ರೇಣುಕಾಸ್ವಾಮಿಗೆ ಮೊದಲು ಹೊಡೆದಿದ್ದಳು. ಪವಿತ್ರಗೌಡನನ್ನು ನೋಡ್ತಿದ್ದಂತೆ ರೇಣುಕಾಸ್ವಾಮಿ ಕಾಲಿಗೆ ಬಿದ್ದಿದ್ದನಂತೆ.

ಈ ವೇಳೆ ತಪ್ಪಾಯ್ತು ರೇಣುಕಸ್ವಾಮಿ ಅಂತ ಕ್ಷಮೆ ಕೇಳಿದ್ದನಂತೆ, ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಪವಿತ್ರ ಹಲ್ಲೆ ನಡೆಸಿದ್ರು. ನಂತರ ದರ್ಶನ್​ ಸೇರಿ ಎಲ್ಲರೂ ರೇಣುಕಸ್ವಾಮಿ ಮೇಲೆ ಮುಗಿಬಿದ್ದಿದ್ದರು. ಇದೀಗ ಪೊಲೀಸರು ಪವಿತ್ರ ಮನೆಯಲ್ಲಿ ಸ್ಥಳ ಮಹಜರ್​ ಮಾಡಿ ಸಾಕ್ಷ್ಯ ಸಂಗ್ರಹಿಸಲಿದ್ದಾರೆ. ಪವಿತ್ರ ಧರಿಸಿದ್ದ ಬಟ್ಟೆ, ಹಲ್ಲೆ ನಡೆಸಿದ್ದ ಚಪ್ಪಲಿಯನ್ನು ಪೊಲೀಸರು ಸೀಜ್ ಮಾಡಲಿದ್ದು, ಈ ಪ್ರಕರಣದಲ್ಲಿ ಪವಿತ್ರ ಚಪ್ಪಲಿಯೂ ಮಹತ್ವದ ಸಾಕ್ಷಿಯಾಗಲಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕಿಡ್ನಾಪ್​ ಸೀನ್ ಯಾವ ಸಿನಿಮಾಗೂ ಕಡಿಮೆ ಇಲ್ಲ : ಬಿಟಿವಿ ಬಳಿ ಇದೆ ಕಿಡ್ನಾಪ್​​ನ ಎಕ್ಸ್​ಕ್ಲೂಸಿಸ್​ ದೃಶ್ಯಗಳು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here