ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನದಲ್ಲಿರುವ ನಟ ದರ್ಶನ್ & ಗ್ಯಾಂಗ್ ಅನ್ನು ನಿನ್ನೆ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ದರ್ಶನ್ & ಗ್ಯಾಂಗ್ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿತ್ತು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಇದೀಗ ಪವಿತ್ರಗೌಡ ಚಪ್ಪಲಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪವಿತ್ರ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಳು. ಹಾಗಾಗಿ ಪವಿತ್ರಗೌಡ ಮನೆಯಲ್ಲೂ ಮಹಜರ್ಗೆ ತಯಾರಿ ನಡೆಸುತ್ತಿದ್ದಾರೆ. ಮಹತ್ವದ ಸಾಕ್ಷಿ ಸೀಜ್ ಮಾಡಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಪವಿತ್ರ ಮನೆಗೆ ಹೋಗಿದ್ದಳು. ಪವಿತ್ರ ಗೌಡನೇ ರೇಣುಕಾಸ್ವಾಮಿಗೆ ಮೊದಲು ಹೊಡೆದಿದ್ದಳು. ಪವಿತ್ರಗೌಡನನ್ನು ನೋಡ್ತಿದ್ದಂತೆ ರೇಣುಕಾಸ್ವಾಮಿ ಕಾಲಿಗೆ ಬಿದ್ದಿದ್ದನಂತೆ.
ಈ ವೇಳೆ ತಪ್ಪಾಯ್ತು ರೇಣುಕಸ್ವಾಮಿ ಅಂತ ಕ್ಷಮೆ ಕೇಳಿದ್ದನಂತೆ, ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಪವಿತ್ರ ಹಲ್ಲೆ ನಡೆಸಿದ್ರು. ನಂತರ ದರ್ಶನ್ ಸೇರಿ ಎಲ್ಲರೂ ರೇಣುಕಸ್ವಾಮಿ ಮೇಲೆ ಮುಗಿಬಿದ್ದಿದ್ದರು. ಇದೀಗ ಪೊಲೀಸರು ಪವಿತ್ರ ಮನೆಯಲ್ಲಿ ಸ್ಥಳ ಮಹಜರ್ ಮಾಡಿ ಸಾಕ್ಷ್ಯ ಸಂಗ್ರಹಿಸಲಿದ್ದಾರೆ. ಪವಿತ್ರ ಧರಿಸಿದ್ದ ಬಟ್ಟೆ, ಹಲ್ಲೆ ನಡೆಸಿದ್ದ ಚಪ್ಪಲಿಯನ್ನು ಪೊಲೀಸರು ಸೀಜ್ ಮಾಡಲಿದ್ದು, ಈ ಪ್ರಕರಣದಲ್ಲಿ ಪವಿತ್ರ ಚಪ್ಪಲಿಯೂ ಮಹತ್ವದ ಸಾಕ್ಷಿಯಾಗಲಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕಿಡ್ನಾಪ್ ಸೀನ್ ಯಾವ ಸಿನಿಮಾಗೂ ಕಡಿಮೆ ಇಲ್ಲ : ಬಿಟಿವಿ ಬಳಿ ಇದೆ ಕಿಡ್ನಾಪ್ನ ಎಕ್ಸ್ಕ್ಲೂಸಿಸ್ ದೃಶ್ಯಗಳು..!