ಬೆಂಗಳೂರು : ಮಾರ್ಚ್ 1ರಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ದುರ್ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹೀಗಿದ್ದರು ಈವರೆಗೆ ಆರೋಪಿಯ ಸುಳಿವು ಸಿಕ್ಕಿಲ್ಲ. ಸದ್ಯ ಆತನಿಗಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಾಂಬರ್ಗಾಗಿ ಸರ್ಚ್ ಮಾಡುತ್ತಿದ್ದಾರೆ. ಜೊತೆಗೆ ಹಲವು ಆಯಾಮದಲ್ಲಿ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
ಇಂದು ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಾತನಾಡಿ, ಸ್ಫೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನನ್ನು ಅರೆಸ್ಟ್ ಮಾಡುತ್ತೇವೆ. ಇದು ಅತ್ಯಂತ ಜಟಿಲವಾದ ಪ್ರಕರಣವಾಗಿದೆ. NIA, NSGಗೂ ಇದು ತುಂಬಾ ಚಾಲೆಂಜ್ ಆಗಿದೆ.
8 ತಂಡ ರಚನೆ ಮಾಡಿದ್ದೇವೆ, 200ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ. ಎಲ್ಲಾ ಆಯಾಮಗಳಲ್ಲೂ ನಾವು ತನಿಖೆ ಮಾಡಿಸುತ್ತಿದ್ದೇವೆ. FSL ಸ್ಯಾಂಪಲ್ ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕ್ತಿದ್ದಾರೆ. ಆರೋಪಿಯನ್ನು ಒಂದು ಅಥವಾ ಎರಡು ದಿನದಲ್ಲಿ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದರು.
ಇನ್ನು, ವ್ಯವಹಾರ ದ್ವೇಷದಿಂದ ಕೃತ್ಯ ಎಸಗಿರುವ ಆ್ಯಂಗಲ್ನಲ್ಲೂ ತನಿಖೆ ಆಗ್ತಿದೆ. ಯಾವುದಾದ್ರೂ ಸಂಘಟನೆ ಕೈವಾಡ ಇದೆಯೇ ಅನ್ನೋದನ್ನೂ ನೋಡ್ತಿದ್ದೇವೆ. ಕೃತ್ಯಕ್ಕೆ ಬ್ಯಾಟರಿ, ಮೊಳೆ, ನಟ್, ಬೋಲ್ಟ್, ಟೈಮರ್ ಬಳಕೆ ಮಾಡಲಾಗಿದೆ. ಮಂಗಳೂರು ಬ್ಲಾಸ್ಟ್ ಸಾಮ್ಯತೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ.
NIA, NSG ಅಧಿಕಾರಿಗಳ ತಂಡವೂ ಪರಿಶೀಲನೆ ಮಾಡುತ್ತಿದೆ. ಬೆಂಗಳೂರಿನ ಸೇಫ್ಟಿ ಬಗ್ಗೆ ಯಾರಿಗೂ ಅನುಮಾನ ಬೇಡ. ಬೆಂಗಳೂರು ತುಂಬಾ ಸೇಫ್ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಬಾಂಬರ್..!