Download Our App

Follow us

Home » ರಾಜಕೀಯ » ಪೆನ್​ಡ್ರೈವ್ ಕೇಸ್​ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? : ಡಾ.ಜಿ.ಪರಮೇಶ್ವರ್..!

ಪೆನ್​ಡ್ರೈವ್ ಕೇಸ್​ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? : ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಯಾರು ತಿಮಿಂಗಿಲ ಅಂತಾ ಗೊತ್ತಿದ್ರೆ ವಿಳಂಬ ಯಾಕೆ..? ತಿಮಿಂಗಿಲ ಯಾರು ಅಂತಾ ಕುಮಾರಸ್ವಾಮಿ ಅವ್ರೇ ಹೇಳಲಿ. ಕೇಸ್​ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೆಚ್​​.ಡಿಕೆ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರು, SIT ಇದೆ ಎಲ್ಲವನ್ನೂ ಗಮನಿಸಿ ತನಿಖೆ ಮಾಡ್ತಿದೆ. ಪ್ರಜ್ವಲ್ ಬರ್ತಾರೋ.. ಬರಲ್ವೋ.. ಬರ್ತೀನಿ ಅಂತಾ ಹೇಳಿದ್ದಾರಾ..?
SIT ತನಿಖೆ ಮಾಡುತ್ತಿದೆ, ಈಗಲೇ ಏನನ್ನೂ ಹೇಳಲು ಆಗಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಜ್ವಲ್​​ ರೇವಣ್ಣ ಪೆನ್​​​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಜ್ಞಾವಂತ ನಾಗರಿಕರು ಪತ್ರ ಬರೆದ ಬಗ್ಗೆ ಮಾತನಾಡಿದ ಅವರು, ಸಾಹಿತಿಗಳು ಸಿಎಂಗೆ ಬರೆದ ಪತ್ರವನ್ನು ನಾನು ನೋಡಿಲ್ಲ. ಆದರೆ ಸಾಹಿತಿ, ಚಿಂತಕರು ಸಮಾಜದ ಆಗುಹೋಗು ಗ್ರಹಿಸುವವರು. ಸಾಹಿತಿಗಳು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಸಾಕಷ್ಟು ಚರ್ಚೆ ಕೂಡ ಆಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

 ಇದನ್ನೂ ಓದಿ : ಸರ್ಕಾರಿ ಕೆಲಸ ಕೊಡಿಸೋದಾಗಿ ಲಕ್ಷ-ಲಕ್ಷ ಮೋಸ : CIDಯ ಸೆಕ್ಷನ್​​​​​​​​ ಸೂಪರಿಂಟೆಂಡ್​ ಸೇರಿ ಇಬ್ಬರು ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here