ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್ವನ್ನು ಜೈಲಾಧಿಕಾರಿಗಳು ನೀಡಿದ್ದಾರೆ.
ಪವಿತ್ರಾ ಗೌಡ ವಿಚಾರಣಾಧೀನ ಕೈದಿ ನಂಬರ್ 6024 ಆಗಿದ್ದು, ಪವಿತ್ರಾ ಗೌಡ ಭೇಟಿಗೆ ಅವರ ತಂದೆ, ತಾಯಿ, ತಮ್ಮ, ಚಿಕ್ಕಮ್ಮ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಪವಿತ್ರಾ ಗೌಡ ತಮ್ಮ ದರ್ಪ ತೋರಿಸಿದ್ದಾನೆ.
ಕ್ಯಾಮೆರಾ ನೋಡಿ ಪವಿತ್ರಾ ತಮ್ಮ ದರ್ಪ ಮೆರೆದು ಒಳಗೆ ಹೋಗಿದ್ದು, ಕೊಲೆ ಕೇಸಲ್ಲಿ ಜೈಲು ಸೇರಿರುವ ಅಕ್ಕ ಸೈಲೆಂಟ್ ಆದರೆ ತಮ್ಮ ಫುಲ್ ವೈಲೆಂಟ್ ಆಗಿದ್ದ. ಪವಿತ್ರಾ ಗೌಡ ಸಹೋದರ ಕೋಪಗೊಂಡ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ : ಸಿಲಿಕಾನ್ ಸಿಟಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಪಿಕಪ್ ವಾಹನ – ಬೆಚ್ಚಿಬಿಳಿಸುತ್ತೆ ಅಪಘಾತದ ದೃಶ್ಯ..!
Post Views: 341