ಬೆಂಗಳೂರು : ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಈಗಾಗಲೇ ನಾಳೆ ನಡೆಯುವ ಮತದಾನಕ್ಕೆ ಚುನಾವಣೆ ಆಯೋಗ ಎಲ್ಲಾ ಸಿದ್ದತೆಯನ್ನು ನಡೆಸಿದೆ. ಮತದಾನದ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ನಾಳೆ ಸ್ಪೆಷಲ್ ಬಸ್, ವಿಶೇಷ ರೈಲು ಸಂಪರ್ಕ ಕಲ್ಪಿಸಲಾಗಿದೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ವೋಟ್ ಮಾಡಲು ಅವಕಾಶವಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಮತದಾನ ನಡೆಯುವ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯಿಂದ ಸ್ಪೆಷಲ್ ಟ್ರೈನ್ ಸೇವೆ ಒದಗಿಸಲಾಗಿದೆ. ನೈರುತ್ಯ ರೈಲ್ವೆ ವಿಜಯಪುರ, ಹೊಸಪೇಟೆ, ಹುಬ್ಬಳ್ಳಿ, ಬೀದರ್ ಸೇರಿ ಬೆಳಗಾವಿಗೆ ಐದು ವಿಶೇಷ ರೈಲುಗಳನ್ನು ಬಿಟ್ಟಿವೆ.
ಇದನ್ನೂ ಓದಿ : ಭವಾನಿ ರೇವಣ್ಣಗೂ ವಿಚಾರಣೆ ಸಂಕಷ್ಟ : ಎರಡು ಪ್ರಕರಣಗಳಲ್ಲಿ ಭವಾನಿ ಹೆಸರು ಉಲ್ಲೇಖ..!
Post Views: 54