Download Our App

Follow us

Home » ಅಪರಾಧ » ವಾಲ್ಮೀಕಿ ಹಗರಣ ಕೇಸ್​​ನಲ್ಲಿ ಜೈಲು ಪಾಲಾದ ನಾಗೇಂದ್ರಗೆ ರಾತ್ರಿಯಿಡೀ ಟೆನ್ಷನ್​​​..!

ವಾಲ್ಮೀಕಿ ಹಗರಣ ಕೇಸ್​​ನಲ್ಲಿ ಜೈಲು ಪಾಲಾದ ನಾಗೇಂದ್ರಗೆ ರಾತ್ರಿಯಿಡೀ ಟೆನ್ಷನ್​​​..!

ಬೆಂಗಳೂರು : ವಾಲ್ಮೀಕಿ ಹಗರಣ ಕೇಸ್​​ನಲ್ಲಿ ಮಾಜಿ ಮಂತ್ರಿ ಬಿ.ನಾಗೇಂದ್ರ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಾಗೇಂದ್ರಗೆ ಆಗಸ್ಟ್​ 3ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿನ್ನೆ​ ಆದೇಶ ಹೊರಡಿಸಿದೆ.

ಜೈಲು ಪಾಲಾದ ನಾಗೇಂದ್ರ ರಾತ್ರಿಯಿಡೀ ಟೆನ್ಷನ್​​ನಿಂದ ​ಸರಿಯಾಗಿ ನಿದ್ರೆ ಕೂಡ ಮಾಡಲಿಲ್ಲ. ಮಾಜಿ ಮಂತ್ರಿ ನಾಗೇಂದ್ರ ಜೈಲಿನಲ್ಲಿ ಫಸ್ಟ್​ ನೈಟ್​ ಕಳೆದಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ಕೇಸ್​ನಲ್ಲಿ ಜೈಲು ಸೇರಿರುವ ನಾಗೇಂದ್ರಗೆ ಈಗ ಕೈದಿ ನಂಬರ್​​​ 7140 ನೀಡಿದೆ.

ನಾಗೇಂದ್ರಗೆ ವಿಶೇಷ ಕೋರ್ಟ್​ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದು, ಜೈಲಿನ ಕ್ವಾರಂಟೈನ್​​ ಸೆಲ್​​ನಲ್ಲಿ ನಾಗೇಂದ್ರ ರಾತ್ರಿ ಕಳೆದಿದ್ದಾರೆ. ಜೈಲು ಸೇರುತ್ತಿದ್ದಂತೆ ಬಿ.ನಾಗೇಂದ್ರ ಮಂಕಾಗಿದ್ದಾರೆ. ಬೆಳಗ್ಗೆ ಜೈಲು ಸಿಬ್ಬಂದಿ ನೀಡಿದ ಕಾಫಿ ಕುಡಿದು, ಜೈಲಲ್ಲಿ ನೀಡಿದ ಟಿಫನ್​ ಸೇವಿಸಿ ನಾಗೇಂದ್ರ ಮೌನಕ್ಕೆ ಜಾರಿದ್ದಾರೆ. ಸಿದ್ದು ಸರ್ಕಾರದ ಮೊದಲ ಮಂತ್ರಿ ಈಗ ಜೈಲು ಪಾಲಾಗಿದ್ದಾರೆ.

ಇದನ್ನೂ ಓದಿ : ಒಬ್ಬಳ ಜೊತೆ ಮದುವೆ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ – ಪ್ರಶ್ನೆ ಮಾಡಿದ ಪತ್ನಿಗೆ ಚಾಕುವಿನಿಂದ ಇರಿದ ಕಿರುತೆರೆ ನಟ ಸನ್ನಿ ಮಹಿಪಾಲ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here