ಬೆಂಗಳೂರು : ವಾಲ್ಮೀಕಿ ಹಗರಣ ಕೇಸ್ನಲ್ಲಿ ಮಾಜಿ ಮಂತ್ರಿ ಬಿ.ನಾಗೇಂದ್ರ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಾಗೇಂದ್ರಗೆ ಆಗಸ್ಟ್ 3ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿನ್ನೆ ಆದೇಶ ಹೊರಡಿಸಿದೆ.
ಜೈಲು ಪಾಲಾದ ನಾಗೇಂದ್ರ ರಾತ್ರಿಯಿಡೀ ಟೆನ್ಷನ್ನಿಂದ ಸರಿಯಾಗಿ ನಿದ್ರೆ ಕೂಡ ಮಾಡಲಿಲ್ಲ. ಮಾಜಿ ಮಂತ್ರಿ ನಾಗೇಂದ್ರ ಜೈಲಿನಲ್ಲಿ ಫಸ್ಟ್ ನೈಟ್ ಕಳೆದಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ಕೇಸ್ನಲ್ಲಿ ಜೈಲು ಸೇರಿರುವ ನಾಗೇಂದ್ರಗೆ ಈಗ ಕೈದಿ ನಂಬರ್ 7140 ನೀಡಿದೆ.
ನಾಗೇಂದ್ರಗೆ ವಿಶೇಷ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದು, ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ನಾಗೇಂದ್ರ ರಾತ್ರಿ ಕಳೆದಿದ್ದಾರೆ. ಜೈಲು ಸೇರುತ್ತಿದ್ದಂತೆ ಬಿ.ನಾಗೇಂದ್ರ ಮಂಕಾಗಿದ್ದಾರೆ. ಬೆಳಗ್ಗೆ ಜೈಲು ಸಿಬ್ಬಂದಿ ನೀಡಿದ ಕಾಫಿ ಕುಡಿದು, ಜೈಲಲ್ಲಿ ನೀಡಿದ ಟಿಫನ್ ಸೇವಿಸಿ ನಾಗೇಂದ್ರ ಮೌನಕ್ಕೆ ಜಾರಿದ್ದಾರೆ. ಸಿದ್ದು ಸರ್ಕಾರದ ಮೊದಲ ಮಂತ್ರಿ ಈಗ ಜೈಲು ಪಾಲಾಗಿದ್ದಾರೆ.
ಇದನ್ನೂ ಓದಿ : ಒಬ್ಬಳ ಜೊತೆ ಮದುವೆ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ – ಪ್ರಶ್ನೆ ಮಾಡಿದ ಪತ್ನಿಗೆ ಚಾಕುವಿನಿಂದ ಇರಿದ ಕಿರುತೆರೆ ನಟ ಸನ್ನಿ ಮಹಿಪಾಲ್..!