ಬೆಂಗಳೂರು : ರೇಣುಕಾಸ್ವಾಮಿ ಎಂಬ ಅಮಾಯಕ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದಿನ ಕಳೆದಂತೆ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪೊಲೀಸ್ ಅಧಿಕಾರಿಗಳು ಒಂದೊಂದೆ ಸಾಕ್ಷಿಯನ್ನು ಕಲೆ ಹಾಕುತ್ತಿದ್ದಾರೆ. ಇದೀಗ 8 ದಿನಗಳ ವಿಚಾರಣೆ ನಂತರ ಆರೋಪಿಗಳು ಸ್ಫೋಟಕ ರಹಸ್ಯ ಬಾಯ್ಬಿಟ್ಟಿದ್ದಾರೆ.
ಹೌದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ವಿಚಾರಣೆ ವೇಳೆ ಶೆಡ್ನಲ್ಲೇ ರೇಣುಕಸ್ವಾಮಿ ಬಟ್ಟೆ ಬಚ್ಚಿಟ್ಟಿರುವುದನ್ನು ಹಂತಕರು ಬಾಯ್ಬಿಟ್ಟಿದ್ದಾರೆ. ನಾಗರಾಜ್, ದೀಪಕ್, ನಂದೀಶ್ನನ್ನು ಶೆಡ್ಗೆ ಕರೆದೊಯ್ದಿದ್ದ ಪೊಲೀಸರು ಆರೋಪಿಗಳು ಕೊಟ್ಟ ಮಾಹಿತಿ ಮೇಲೆ ರಕ್ತ ಸಿಕ್ತ ಬಟ್ಟೆಗಳು ಪತ್ತೆ ಹಚ್ಚಿದ್ದಾರೆ.
ಬಡಿದುಕೊಂದ ನಂತರ ಆರೋಪಿಗಳು ರಕ್ತಸಿಕ್ತ ಬಟ್ಟೆಯನ್ನು ಶೆಡ್ನಲ್ಲಿ ಮುಚ್ಚಿಟ್ಟಿದ್ದರು. ನಂತರ ರೇಣುಕಾಸ್ವಾಮಿ ಮೃತದೇಹಕ್ಕೆ ಬೇರೆ ಬಟ್ಟೆ ತೊಡಿಸಿ ಕಾರಿನಲ್ಲಿ ಶೆಡ್ನಿಂದ ಸಾಗಿಸಿದ್ದರು. ಆರೋಪಿ ಪವನ್ ಮೃತದೇಹಕ್ಕೆ ಬಟ್ಟೆಗಳನ್ನು ಹಾಕಿದ್ದ ಎಂದು ತಿಳಿಸಿದ್ದಾರೆ. ಇನ್ನು ಮೃತದೇಹ ಗುರುತಿಸಿದ್ದ ರೇಣುಕ ಫ್ಯಾಮಿಲಿ ಬಟ್ಟೆ ಬೇರೆ ಎಂದಿತ್ತು. ಹೀಗಾಗಿ ಬಟ್ಟೆ ಬಗ್ಗೆ ವಿಚಾರಣೆ ಮಾಡಿದ್ದ ಪೊಲೀಸರಿಗೆ ರಕ್ತಸಿಕ್ತ ಬಟ್ಟೆ ಮುಚ್ಚಿಟ್ಟಿರುವುದು ತಿಳಿದು ಬಂದಿದೆ. ಈ ಬಟ್ಟೆಗಳನ್ನು ಈಗಾಗಲೇ ಪೊಲೀಸರು FSLಗೆ ಕಳಿಸಿರುವ ಮಾಹಿತಿ ಲಭ್ಯವಾಗಿದೆ.
ಇನ್ನು ಇಡೀ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿರುವುದು ರೇಣುಕಾಸ್ವಾಮಿ ಮೊಬೈಲ್. ಆದರೆ ಜೂನ್ 8ರ ಸಂಜೆಯಿಂದ ರೇಣುಕಸ್ವಾಮಿ ಮೊಬೈಲ್ ಸ್ವಿಚ್ಆಫ್ ಬರ್ತಿದ್ದು, ಪೊಲೀಸರು ಮೊಬೈಲ್ಗಾಗಿ ಶೋಧ ಮಾಡುತ್ತಿದ್ದಾರೆ. ರಾಜಾಕಾಲುವೆ ಸೇರಿ ಹಲವೆಡೆ ರೇಣುಕಸ್ವಾಮಿ ಮೊಬೈಲ್ಗೆ ಹುಡುಕಾಟ ನಡೆಸುತ್ತಿರುವ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ನೆರವು ಪಡೆದು ರಾಜಕಾಲುವೆಯಲ್ಲಿ ಶೋಧ ಕಾರ್ಯಮಾಡುತ್ತಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್ – ಬಂಧಿತ ಆರೋಪಿ ನಾಗೇಶ್ವರ್ ರಾವ್ ಮನೆಯಲ್ಲಿ 1.49 ಕೋಟಿ ಹಣ ಜಪ್ತಿ..!