ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದ್ದು, ದರ್ಶನ್ ಮತ್ತು ಟೀಂ ಕೈಯಾರೆ ಕೊಲೆಯಾದ ರೇಣುಕಾಸ್ವಾಮಿ ಮೈ ಮೇಲಿದ್ದ ಗೋಲ್ಡ್ ಏನಾಯಿತು ಎಂಬ ಪ್ರಶ್ನೆ ಪೊಲೀಸರನ್ನು ಕಾಡಿದೆ. ಸದ್ಯ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, 10 ಲಕ್ಷ ರೂಪಾಯಿ ಹಣವನ್ನು ರಾಘವೇಂದ್ರ ಪತ್ನಿಗೆ ಕೊಟ್ಟು ಕಳಿಸಿದ್ದನು ಎನ್ನಲಾಗಿದೆ. ಇನ್ನು ರೇಣುಕಾಸ್ವಾಮಿ ಮೈಮೇಲಿದ್ದ ಆಭರಣಗಳೇ ಪ್ರಕರಣಕ್ಕೆ ಮಹತ್ವದ ಸಾಕ್ಷ್ಯವಾಗಲಿದೆ.
ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ರಾಘವೇಂದ್ರ ಪಟ್ಟಣಗೆರೆಯ ಶೆಡ್ನಿಂದ ಎಸ್ಕೇಪ್ ಆಗಿದ್ದ. ಇದಾದ ನಂತರ ದರ್ಶನ್ ಕಡೆಯವರು ರಾಘವೇಂದ್ರಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಫೋನ್ ಸಂಪರ್ಕಕ್ಕೆ ಸಿಕ್ಕಗಾ 10 ಲಕ್ಷ ರೂಪಾಯಿ ಹಣ ಸಹ ಕೊಡ್ತೀವಿ ಎಂದು ದರ್ಶನ್ ಗ್ಯಾಂಗ್ ತಿಳಿಸಿತ್ತು. ಇದಾದ ಬಳಿಕ ರಾಘವೇಂದ್ರ ವಾಪಾಸ್ ಬಂದಿದ್ದನು. ಇದರ ಬೆನ್ನಲ್ಲೇ ಪತ್ನಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ ರಾಘವೇಂದ್ರ ಲಾಡ್ಜ್ ಒಂದರಲ್ಲಿ ಪತ್ನಿಯನ್ನು ಉಳಿದುಕೊಂಡಿದ್ದನು.
ಅಂತಿಮವಾಗಿ ಮೃತದೇಹ ಎಸೆಯಲು ಹೋದಾಗ ರಾಘವೇಂದ್ರ ಕೂಡ ಜೊತೆಗಿದ್ದನು. ಇದೇ ವೇಳೆ ಮೃತ ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನದ ಉಂಗುರ, ಬೆಳ್ಳಿ ಕರಡಗ, ಚಿನ್ನದ ಸರ, ವಾಚ್ಅನ್ನು ರಾಘವೇಂದ್ರ ಆಂಡ್ ಟೀಂ ಕಸಿದುಕೊಂಡಿದೆ. ಇನ್ನು ರೇಣುಕಾಸ್ವಾಮಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, 10 ಲಕ್ಷ ರೂಪಾಯಿ ಹಣವನ್ನು ರಾಘವೇಂದ್ರ ಪತ್ನಿಗೆ ಕೊಟ್ಟು ಕಳಿಸಿದ್ದನು. ಇನ್ನು ರೇಣುಕಾಸ್ವಾಮಿ ಮೈಮೇಲಿದ್ದ ಆಭರಣಗಳೇ ಪ್ರಕರಣಕ್ಕೆ ಮಹತ್ವದ ಸಾಕ್ಷ್ಯವಾಗಲ್ಲಿದ್ದು, ಸದ್ಯ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊ*ಲೆ ಕೇಸ್: ಪವಿತ್ರಗೌಡ PA ದೇವರಾಜ್ನನ್ನು ವಶಕ್ಕೆ ಪಡೆದ ಪೊಲೀಸರು..!