Download Our App

Follow us

Home » ಅಪರಾಧ » ಕೋರ್ಟ್​ನತ್ತ ‘ಡಿ’ ಗ್ಯಾಂಗ್ ​​- ಕೋರ್ಟ್​ಗೆ ಪೊಲೀಸರಿಂದ ಟೈಟ್​​ ಸೆಕ್ಯೂರಿಟಿ..! 

ಕೋರ್ಟ್​ನತ್ತ ‘ಡಿ’ ಗ್ಯಾಂಗ್ ​​- ಕೋರ್ಟ್​ಗೆ ಪೊಲೀಸರಿಂದ ಟೈಟ್​​ ಸೆಕ್ಯೂರಿಟಿ..! 

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಸತತ 10 ದಿನಗಳಿಂದ ಸೆರೆವಾಸದಲ್ಲಿದ್ದು, ಇಂದಿಗೆ ದರ್ಶನ್ ಗ್ಯಾಂಗ್​ನ ಕಸ್ಟಡಿ ಅವಧಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಸೇರಿ ಬಂಧಿತ 17 ಆರೋಪಿಗಳನ್ನು ಪೊಲೀಸರು  24ನೇ ACMM ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. 

ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಪೊಲೀಸರು ಒಂದೇ ವ್ಯಾನ್​​​ನಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ದರ್ಶನ್​ ನೋಡಲು ಕೋರ್ಟ್​ಗೆ ಅಭಿಮಾನಿಗಳು ಬರೋ ಸಾಧ್ಯತೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕೋರ್ಟ್​ ಮುಂದೆ ಬಿಗಿ ಪೊಲೀಸ್​​ ಬಂದೋಬಸ್ತ್​ ನಿಯೋಜನೆ ಮಾಡಲಾಗಿದೆ. ಕೋರ್ಟ್​ ಮುಂದೆ ಬಿಗಿ ಪೊಲೀಸ್​​ ಬಂದೋಬಸ್ತ್​ ನಿಯೋಜನೆ ಮಾಡಿರುವ ಪೊಲೀಸರು , 2 KSRP ತುಕಡಿ ಸೇರಿ 500ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿದ್ದಾರೆ.

ಇನ್ನು ತನಿಖೆ, ಮಹಜರು ಬಹುತೇಕ ಮುಗಿಸಿರೋ ಪೊಲೀಸರು 118 ಸಾಕ್ಷ್ಯಗಳನ್ನು ಕಲೆಕ್ಟ್​ ಮಾಡಿದ್ದಾರೆ. ಹೀಗಾಗಿ ಹಂತಕರನ್ನು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಆದರೆ  ಕೋರ್ಟ್ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ  ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಹಾಸನದಲ್ಲಿ ಹಾಡುಹಗಲೇ ಗುಂಡಿನ ದಾಳಿ – ಇಬ್ಬರು ಸಾವು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here