ಹಾಸನ : ಹಾಸನ ಹೊಯ್ಸಳನಗರದಲ್ಲಿ ಹಾಡಹಗಲೇ ಭಯಾನಕ ಗುಂಡಿನ ದಾಳಿ ನಡೆದಿದೆ. ಘಟನೆಯ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಹಾಸನದ ಶರಫತ್ ಅಲಿ, ಬೆಂಗಳೂರಿನ ಆಶಿಫ್ ಮೃತರು.
ಮಟಮಟ ಮಧ್ಯಾಹ್ನ ಹೊಯ್ಸಳ ನಗರದಲ್ಲಿ ಫೈರಿಂಗ್ ಸದ್ದು ಮಾಡಿದ್ದು, ಸ್ಥಳೀಯನ್ನು ಬೆಚ್ಚಿಬೀಳಿಸಿದೆ. ನಡುರಸ್ತೆಯಲ್ಲೇ ಫೈರಿಂಗ್ ಮಾಡಿಕೊಂಡಿದ್ದಾರೆ. ಶೂಟೌಟ್ ಆದ ಜಾಗಕ್ಕೆ ಹಾಸನ ಎಸ್ಪಿ ಸುಜೀತಾ ಮಹ್ಮದ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಆಸ್ತಿ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಆಸ್ತಿ ವಿಚಾರಕ್ಕಾಗಿ ಇಬ್ಬರು ಯುವಕರು ಕಿತ್ತಾಡಿಕೊಂಡಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಒಬ್ಬನಿಗೆ ಮತ್ತೊಬ್ಬ ಗುಂಡಿಕ್ಕಿದ್ದಾನೆ. ನಂತರ ತಾನೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ನಿಧನ..!
Post Views: 156