ಬೆಂಗಳೂರು : ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿದೆ. ಸೋಮವಾರದ ವಾದದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಚಿವ ಸಂಪುಟದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದರು.
ಇಂದು ಸಿದ್ದರಾಮಯ್ಯ ಪರ ಮಧ್ಯಾಹ್ನ 12 ಗಂಟೆಗೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ಕುತೂಹಲ ಕೆರಳಿಸಿದೆ. ಸಿಎಂ ಸಿದ್ದರಾಮಯ್ಯ & ಟೀಂ ಪುಲ್ ಟೆನ್ಷನ್ನಲ್ಲಿದ್ದು, ಹೈಕೋರ್ಟ್ನಲ್ಲಿ ಏನಾಗುತ್ತೆ ಏನು ಅಂತಾ ಆತಂಕದಲ್ಲಿದ್ದಾರೆ.
ಹಿರಿಯ ವಕೀಲ ಸಿಂಘ್ವಿ ಅವರ ವಾದ ಮುಗಿದ ಬಳಿಕ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಮೆಹ್ತಾ ವಾದ ಮಂಡಿಸಲಿದ್ದಾರೆ. ಇಂದೇ ತೀರ್ಪು ಹೊರ ಬೀಳುತ್ತಾ? ತೀರ್ಪು ಕಾಯ್ದಿರಿಸುತ್ತಾ ಕೋರ್ಟ್? ಎಂದು ಕಾಂಗ್ರೆಸ್ ಪಾಳಯದಲ್ಲಿ ಟೆನ್ಷನ್ ಶುರುವಾಗಿದೆ.
ಸಿದ್ದು ಪ್ರಾಸಿಕ್ಯೂಷನ್ ಭವಿಷ್ಯ!
- ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರ
- ಹೈಕೋರ್ಟ್ನಲ್ಲಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ
- ಒಂದ್ವೇಳೆ ಇವತ್ತು ಸಾಧ್ಯವಾಗದಿದ್ದರೆ ತೀರ್ಪು ಕಾಯ್ದಿರಿಸಬಹುದು
- ತೀರ್ಪುನ್ನ ಹೈಕೋರ್ಟ್ ಏಕಸದಸ್ಯ ಪೀಠ ಕಾಯ್ದಿರಿಸಬಹುದು
- ಪ್ರಾಸಿಕ್ಯೂಷನ್ ಕ್ರಮ ಎತ್ತಿಹಿಡಿದ್ರೆ ಸಿದ್ದುಗೆ ಕಾನೂನು ಸಂಕಷ್ಟ
- ಪ್ರಾಸಿಕ್ಯೂಷನ್ ಅನೂರ್ಜಿತವಾದ್ರೆ, ಗೆಹ್ಲೋಟ್ಗೆ ಮುಖಭಂಗ
- ಈ ಬೆಳವಣಿಗೆ ಬಿಜೆಪಿ ಸಹಿತ ಕೇಂದ್ರ ಸರ್ಕಾರಕ್ಕೆ ಮುಜುಗರ
ಇದನ್ನೂ ಓದಿ : ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ – ರಾಜ್ಯ ಸರ್ಕಾರದ ವಿರುದ್ಧ HDK ಆಕ್ರೋಶ..!