ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಪ್ರತಿದಿನ ಅನೇಕರು ಜೈಲಿಗೆ ಬರುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈಗಾಗಲೇ ಭೇಟಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ನಟ ವಿನೋದ್ ಪ್ರಭಾಕರ್ ಹಾಗೂ ನಟಿ ರಕ್ಷಿತಾ ಪ್ರೇಮ್ ದಂಪತಿ ಕೂಡ ಭೇಟಿ ಮಾಡಿದ್ದರು.
ಇದೀಗ ಅಮ್ಮ-ಸಹೋದರನನ್ನು ಎಷ್ಟೇ ದೂರ ಮಾಡಿದ್ರು ದರ್ಶನ್ ನನ್ನ ನೋಡೋಕೆ ಇಂದು ಮೀನಾ ತೂಗುದೀಪ್ ಹಾಗೂ ದಿನಕರ್ ತೂಗುದೀಪ್ ಪರಪ್ಪನ ಅಗ್ರಹಾರಕ್ಕೆ ಬರ್ತಿದ್ದಾರೆ. ಮಧ್ಯಾಹ್ನದ ಸುಮಾರಿ ಮೈಸೂರಿಂದ ಬೆಂಗಳೂರಿಗೆ ಫ್ಯಾಮಿಲಿ ಬರಲಿದೆ.
ಸಾಕಷ್ಟು ವರ್ಷಗಳಿಂದ ನಟ ದರ್ಶನ್ ತಾಯಿ ಹಾಗೂ ತಮ್ಮನಿಂದ ದೂರ ಉಳಿದಿದ್ದಾರೆ. ಕಳೆದ 20 ದಿನಗಳಿಂದಲೂ ಮಗ ದರ್ಶನ್ ವಿಷಯವಾಗಿ ಮೌನವಾಗಿರುವ ತಾಯಿ ಮೀನಾ ತೂಗುದೀಪ್ ಇದೀಗ ಸಂಕಷ್ಟದಲ್ಲಿ ಮಗನ ಕೈಹಿಡಿಯುತ್ತಿದ್ದಾರೆ.
ಇದನ್ನೂ ಓದಿ : ಬಳ್ಳಾರಿ : ದಲ್ಲಾಳಿಗಳ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ರೈತರು..!
Post Views: 165