ಬೆಂಗಳೂರು : ಗ್ಯಾಸ್ ಲೀಕ್ ಆಗಿ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ BBMP ಕೇಂದ್ರ ಕಚೇರಿಯ ಆದಿಶಕ್ತಿ ದೇವಾಲಯದ ಬಳಿ ನಡೆದಿದೆ. ಎಚ್ಚರ ತಪ್ಪಿದ್ರೆ ಪಾಲಿಕೆಯಲ್ಲಿ ದೊಡ್ಡ ಅನಾಹುತವೇ ನಡೆಯುತ್ತಿತ್ತು.
ಇಂದು ನಾಗರಪಂಚಮಿ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಆದಿಶಕ್ತಿ ದೇವಾಲಯದಲ್ಲೂ ಪೂಜೆ ನಡೆಯುತ್ತಿತ್ತು. ಈ ವೇಳೆ ದೇಗುಲದಲ್ಲಿ ವಿಶೇಷ ಪ್ರಸಾದ ತಯಾರಿಸುವಾಗ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇನ್ನು ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ, ಸಿಲಿಂಡರ್ಗೆ ಗೋಣಿ ಚೀಲದಿಂದ ಮುಚ್ಚಿ ಬೆಂಕಿ ನಂದಿಸಿದ್ದಾರೆ. ಇನ್ನು ನಾಗರಪಂಚಮಿ ಪೂಜೆಗಾಗಿ ನೂರಾರು ಮಂದಿ ಬಂದಿದ್ದರು. ಆದರೆ ಅಡುಗೆ ಭಟ್ಟರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ಕೊಂಚ ಯಾಮಾರಿದ್ದರೂ ದೊಡ್ಡ ಅನಾಹುತ ಆಗ್ತಿತ್ತು.
ಇದನ್ನೂ ಓದಿ : ಮಡನೂರ್ ಮನು ನಟನೆಯ ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್..!
Post Views: 41