ಬೆಂಗಳೂರು : ಸೀರಿಯಲ್ ಹಾಗೂ ಸಿನಿಮಾ ಕಲಾವಿದರ ಬದುಕಿನ ಬಗ್ಗೆ ಚರ್ಚೆಗಳು ದಿನ ನಿತ್ಯ ಆಗುತ್ತಲೇ ಇರುತ್ತವೆ. ಅವರು ತಪ್ಪು ಮಾಡಿದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ. ಇದೀಗ ‘ನೇತ್ರಾವತಿ’ ಕನ್ನಡ ಸೀರಿಯಲ್ನಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ ಒಂದು ಮದುವೆ ಆಗಿ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸನ್ನಿ ಮಹಿಪಾಲ್ ತಮ್ಮ ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಪದೇ-ಪದೇ ಜಗಳ ಮಾಡ್ತಿದ್ದ ನಟ ಸನ್ನಿ, ತನ್ನ ಪತ್ನಿಗೆ ಚಾಕುವಿನಿಂದ ಇರಿದು ಥಳಿಸಿದ್ದಾರೆ. ಗಲಾಟೆಯಲ್ಲಿ ಪತ್ನಿಯ ಹೊಟ್ಟೆಗೆ ಬಲವಾಗಿ ಏಟಾಗಿದ್ದರಿಂದ ಆಕೆಗೆ ಗರ್ಭಪಾತವಾಗಿದೆ.
ಗಲಾಟೆ ಬಳಿಕ 112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಭೇಟಿ ಕೊಟ್ಟಿದ್ದರು. ಗರ್ಭಪಾತದಿಂದಾಗಿ ಮಹಿಳೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಅವರು ಮನವಿ ಮಾಡಿದ್ದರು. ಆದರೆ, ಹೊಯ್ಸಳ ಸಿಬ್ಬಂದಿ ಬಳಿ ಮಹಿಳಾ ಪೋಲಿಸರು ಯಾರು ಇರಲಿಲ್ಲ. ಹಾಗಾಗಿ ಸ್ವತಃ ತಾವೆ ಕಾರು ಚಲಾಯಿಸಿಕೊಂಡು ಹೋಗಿ ಸನ್ನಿ ಮಹಿಪಾಲ್ ಪತ್ನಿ ಆಸ್ಪತ್ರೆಗೆ ಸೇರಿದ್ದಾರೆ.
ಇದನ್ನೂ ಓದಿ : ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ – ಈ ಬಾರಿ ರಾಜ್ಯಕ್ಕೆ ಬಂಪರ್ ಗಿಫ್ಟ್ ಕೊಡ್ತಾರಾ ನಮೋ?