Download Our App

Follow us

Home » ಅಪರಾಧ » ಹೈಕೋರ್ಟ್​ನಲ್ಲಿ ಕೈಕೊಯ್ದುಕೊಂಡು ವ್ಯಕ್ತಿ ಆತ್ಮಹ*ತ್ಯೆಗೆ ಯತ್ನ..!

ಹೈಕೋರ್ಟ್​ನಲ್ಲಿ ಕೈಕೊಯ್ದುಕೊಂಡು ವ್ಯಕ್ತಿ ಆತ್ಮಹ*ತ್ಯೆಗೆ ಯತ್ನ..!

ಬೆಂಗಳೂರು : ಹೈಕೋರ್ಟ್​ನ ಪೀಠದ ಮುಂದೆಯೇ ವ್ಯಕ್ತಿಯೊಬ್ಬರು ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಮೂಲದ 51 ವರ್ಷದ ಶ್ರೀನಿವಾಸ್​ ಎಂಬಾತ ರೇಜರ್​​​ ಹಿಡಿದು ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಈ ಘಟನೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ, ಡಾ. ನ್ಯಾ. ಪ್ರಭಾಕರ್‌ ಶಾಸ್ತ್ರಿ ಪೀಠದ ಮುಂಭಾಗದಲ್ಲಿ ನಡೆದಿದೆ.

ತಕ್ಷಣವೇ ಪೊಲೀಸರು ಶ್ರೀನಿವಾಸ್‌ ಅವರನ್ನು ಬೌರಿಂಗ್​​​ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಶ್ರೀನಿವಾಸ್​ಗೆ ಆಪರೇಷನ್ ನಡೆಯುತ್ತಿದೆ. ವಿಧಾನಸೌಧ ಠಾಣೆಯಲ್ಲಿ ಶ್ರೀನಿವಾಸ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

IPC 309, 425 ಅಡಿ ಸೂಸೈಡ್​ಗೆ ಯತ್ನ, ಅಕ್ರಮವಾಗಿ ಆಯುಧ ತಂದ ಅಡಿ ಕೇಸ್ ದಾಖಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಲು ಶ್ರೀನಿವಾಸ್ ಚಿನ್ನಂ ಬಂದಿದ್ದ.

ಇದನ್ನೂ ಓದಿ : ಮೂರು ತಿಂಗಳ ಸಸ್ಪೆನ್ಸ್​ಗೆ ಬ್ರೇಕ್ : ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದ ಸುಮಲತಾ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here