ಕನ್ನಡದ ‘ಗೀತಾ’ ಧಾರಾವಾಹಿ ಖ್ಯಾತಿಯ ನಟಿ ಭವ್ಯ ಗೌಡ ಇತ್ತೀಚಿಗೆ ರೇಷ್ಮೆ ಸೀರೆ ಧರಿಸಿ ಸುಂದರ ಫೋಟೋಶೂಟ್ ಮಾಡಿಸಿದ್ದಾರೆ. ಆರೆಂಜ್ ಮತ್ತು ಪಿಂಕ್ ಕಾಂಬಿನೇಷನ್ ಬಣ್ಣದ ಸೀರೆಯಲ್ಲಿ ಭವ್ಯ ಮಿಂಚಿದ್ದಾರೆ.
ಈ ಸೀರೆಯ ಬ್ಲೌಸ್ ಡಿಸೈನ್ ಮತ್ತು ಬಾರ್ಡರ್ ಡಿಟೇಲಿಂಗ್ ಲೇಪನಾ ನಾಗರಾಜ್ ಮಾಡಿದ್ದು, ಈ ಫೋಟೋಶೂಟ್ನಲ್ಲಿ ಭವ್ಯ ಗೌಡ ಪಕ್ಕಾ ಮಧುಮಗಳಂತೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮಂಟ್ಸ್ ಮಾಡಿ ಭವ್ಯ ಗೌಡರ ಕಾಲೆಳೆದಿದ್ದಾರೆ.
ರೇಷ್ಮೆ ಸೀರೆಗೆ ಲುಕ್ ನೀಡಲು ಒಂದು ಚಿನ್ನದ ಮಾಲೆ ಮತ್ತೊಂದು ಮುತ್ತಿನ ಚೋಕರ್ ಕೂಡ ಭವ್ಯ ಧರಿಸಿದ್ದರು. ಕೈ ತುಂಬಾ ಬಳೆ ಮತ್ತು ಉಂಗುರ ಧರಿಸಿ ಮಿಂಚಿದ್ದರು. ಈ ಆಭರಣಗಳು ಗಜರಾಜ ಜ್ಯೂವೆಲರಿಗೆ ಸೇರಿದ್ದು, ಹೀಗಾಗಿ ಎಷ್ಟು ಗ್ರಾಂ ಚಿನ್ನ ಹಾಕಿದ್ಯಾ? ಇಷ್ಟೋಂದು ಹಣ ಇದ್ಮೇಲೆ ಯಾಕೆ ಸೀರಿಯಲ್ ಮಾಡ್ತಿದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇನ್ನು ಅಭಿಮಾನಿಯೋರ್ವ ಕವಿತೆಯ ಮೂಲಕ ಭವ್ಯ ಗೌಡ ಫೋಟೋಗೆ ಮೆಚ್ಚು ವ್ಯಕ್ತಪಡಿಸಿದ್ದಾನೆ. “ಇಟ್ಟು ಬಾ ಬಲಗಾಲ, ಮರೆಯಾಗಲಿ ಮನದ ಬರಗಾಲ, ಸುರಿಸಿ ಪ್ರೇಮದ ಮಳೆಯ ಸೃಷ್ಟಿಸು ಮಳೆಗಾಲ, ತಬ್ಬಿಕೊಂಡಿರಲು ನಿನ್ನ ಇರಲಿ ಎಂದೆಂದೂ ಚಳಿಗಾಲ, ಇಟ್ಟಿರುವೆ ನಿನಗೆ ಮೀಸಲು ಬಾಳಿನ ಬಹುಪಾಲ” ಎಂದು ಬರೆದುಕೊಂಡಿದ್ದಾನೆ.
ಹಾಗೆಯೇ “ಬೇಕೇಬೇಕು ಬೇಕೇ ಬೇಕು ನಿನ್ನಂಥ ಸ್ಪೂರ್ತಿ ಪ್ರತಿ ಕವಿಗೆ, ನಿನ್ನ ಮದುರ ಮಾತುಗಳ ಬಯಕೆ ಪ್ರತಿ ಕಿವಿಗೆ, ಮನ ಬಯಸಿದೆ ನಿನ್ನ ಪ್ರೇಮದ ಸವಿಗೆ, ರಸಿಕರು ಕಾತರಿಸಿಹರು ನಿನ್ನ ನಗು ಸವಿ ಹೋಳಿಗೆ, ಹೇಳೆಂದು ಪಾದಾರ್ಪಣೆ ನನ್ನ ಬಾಳಿಗೆ ಎಂದು ಬರೆದಿದ್ದಾನೆ. ಇನ್ನು ಶೂಟಿಂಗ್ ಬಿಡುವಿನ ಸಮಯದಲ್ಲಿ ಭವ್ಯಾ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಮಾಡರ್ನ್ ಮಾತ್ರವಲ್ಲ ಎಲ್ಲಾ ಶೈಲಿಯ ಟ್ರೆಡಿಷನಲ್ ಲುಕ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನ – ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಸಿಎಂ ಸೂಚನೆ..!?